ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಲಿಗಾಗಿ ಬಾಯ್ತೆರೆದ ಜಲಮಂಡಳಿಯ ಒಳಚರಂಡಿ

ಬೆಂಗಳೂರು : ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂಬಾಗದಲ್ಲಿ ಓಪನ್ ಆಗಿರೋ ಡ್ರೈನೇಜ್ ವಾಹನ ಸವಾರರಿಗೆ ಮೃತ್ಯು ಸ್ವರೂಪಿ ಆಗಿ ಕಾಡ್ತಿದೆ.

ಒಳಚರಂಡಿಯ ಮೇಲ್ಭಾಗದ ಕಾಂಕ್ರೀಟ್ ಸ್ಲಾಬ್ ಸಂಪೂರ್ಣ ಕಿತ್ತು ಬಂದಿದೆ. ಕಾಂಕ್ರೀಟ್ ಸ್ಲಾಬ್ಯನ್ ಸರಳುಗಳ ಮೇಲೆ ವಾಹನಗಳು ಸಂಚಾರ ಮಾಡ್ತಾ ಇದ್ದು ಒಳಚರಂಡಿಯ ಕಾಂಕ್ರೀಟ್ ಸ್ಲಾಬ್ ಬಲಿಗಾಗಿ ಬಾಯ್ತೆರೆದಿರುವ ಹಾಗೇ ಕಾಣಿಸ್ತಾ ಇದೆ. ಸುಮಾರು 15 ಅಡಿಕ್ಕಿಂತಲೂ ಆಳ ಇರೋ ಒಳಚರಂಡಿ ಇದಾಗಿದ್ದು ಅಧಿಕಾರಿಗಳು ಜಾಗ್ರತೆ ವಹಿಸದೆ ಇದ್ರೆ ವಾಹನ ಸವಾರರಿಗೆ ಕಂಟಕ ಆಗೋದ್ರಲ್ಲಿ ಅನುಮಾನವಿಲ್ಲ.

ಸಂಪೂರ್ಣವಾಗಿ ಕಾಂಕ್ರೀಟ್ ಕಿತ್ತು ಬಂದು ಸರಳುಗಳು ಕಾಣಿಸುತ್ತಿವೆ. ಜಲಮಂಡಳಿ ಒಳಚರಂಡಿ ವ್ಯವಸ್ಥೆಯ ಕಾಂಕ್ರೀಟ್ ಸ್ಲಾಬ್ ಸರಳುಗಳ ಮೇಲೆ ವಾಹನಗಳ ಓಡಾಟ ಆಗ್ತಾ ಇದ್ದು ಬಾರಿ ವಾಹನಗಳು ,ಬಸ್ಗಳು ಇದ್ರ ಮೇಲೆ ಹೋದ್ರೆ ಕಂಟಕ ತಪ್ಪಿದ್ದಲ್ಲ..

Edited By : Ashok M
PublicNext

PublicNext

17/10/2024 10:58 am

Cinque Terre

30.7 K

Cinque Terre

0

ಸಂಬಂಧಿತ ಸುದ್ದಿ