ಬೆಂಗಳೂರು: ಕಳೆದ ಎರಡ್ಮೂರು ದಿನದಿಂದ ಜಲಾವೃತ ಆಗಿದ್ದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಜನರಿಗೆ ಕೊನೆಗೂ ಸಮಸ್ಯೆಯಿಂದ ಮುಕ್ತಿ ಸಿಕ್ಕಿದೆ. ಅಪಾರ್ಟ್ಮೆಂಟ್ನಿಂದ ಸಂಪೂರ್ಣವಾಗಿ ಅಗ್ನಿ ಶಾಮಕ ಹಾಗೂ SDRF ಸಿಬ್ಬಂದಿ ನೀರು ಹೊರ ಹಾಕುವ ಕೆಲಸ ಮಾಡಿದ್ದಾರೆ.
ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ನೀರು ಹೊರಹಾಕಲಾಗಿದೆ. ಸತತ ಎರಡು ದಿನದಿಂದಲೂ ಕಾರ್ಯಾಚರಣೆ ನಡೆದಿದ್ದು ಮೊನ್ನೆಯ ಮಳೆಗೆ ಅಪಾರ್ಟ್ಮೆಂಟ್ ಸಂಪೂರ್ಣ ಜಲಾವೃತ ಆಗಿತ್ತು. 603 ಫ್ಲ್ಯಾಟ್ ಗಳ 2500 ಜನರಿಗೆ ಜಲದಿಗ್ಬಂಧನ ಎದುರಾಗಿತ್ತು. ಮನೆಯಿಂದ ಹೊರಬರಲು ಆಗದೇ ಪರದಾಟ ನಡೆಸಿದ್ದ ಜನರು ಇದೀಗ ಸಹಜ ಸ್ಥಿತಿಗೆ ರಿಟರ್ನ್ ಆಗಿದ್ದು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.
PublicNext
18/10/2024 12:06 pm