ಬೆಂಗಳೂರು: ಮಳೆಗೆ ಅಧ್ವಾನ ಆಗಿ ಹೋಗಿರುವ ಮುತ್ತಾನಲ್ಲೂರು ರಸ್ತೆ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಅಪಾಯಕಾರಿ ಗುಂಡಿಗಳನ್ನ ಮುಚ್ಚಿ ತೇಪೆ ಹಾಕುವ ಕೆಲಸ ನಡೆಯುತ್ತಿದೆ. ಮಳೆ ಆರ್ಭಟಕ್ಕೆ ಕಿತ್ತೋಗಿದ್ದ ರಸ್ತೆಗೆ ಜಲ್ಲಿ ಹಾಗೂ ಮಣ್ಣು ಹಾಕಿ ವಾಹನ ಸವಾರರ ಓಡಾಟ ಸುಗಮ ಮಾಡಲಾಗುತ್ತಿದೆ.
ತಾತ್ಕಾಲಿಕವಾಗಿ ಗುಂಡಿ ಮುಚ್ಚಿ ಜನರಿಗೆ ತಾತ್ಕಾಲಿಕ ರಿಲೀಫ್ ಪಾಲಿಕೆ ಕಡೆಯಿಂದ ಸಿಗ್ತಿದೆ.. ರಸ್ತೆ ಯಾವುದು...ಗುಂಡಿ ಯಾವುದು ಅಂತಾನೇ ಗೊತ್ತಾಗ್ತಿರಲಿಲ್ಲ. ಒಂದೇ ಜಾಗದಲ್ಲಿ 50ಕ್ಕೂ ಹೆಚ್ಚು ಗುಂಡಿಗಳಿದ್ದವು.. ಗುಂಡಿ ಮಧ್ಯೆ ರಸ್ತೆ ಹುಡುಕುವ ಪ್ರಮೇಯ ಇತ್ತು. ಸದ್ಯ ಈಗ ಕೊನೆಗೂ ರಸ್ತೆಗೆ ಜಲ್ಲಿಕಲ್ಲು ಭಾಗ್ಯ ಸಿಕ್ಕಿರುವುದು ವಾಹನ ಸವಾರರಿಗೆ ಕೊಂಚ ಸಮಾಧಾನ ತಂದಿದೆ.
PublicNext
18/10/2024 12:23 pm