ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸಚಿವ ಸಂತೋಷ್ ಲಾಡ್ ಮನೆಗೆ ಸಂಡೂರು ಕಾರ್ಯಕರ್ತರ ಭೇಟಿ : ಉಪಚುನಾವಣೆ ಕುರಿತು ವಿಸ್ತೃತ ಚರ್ಚೆ

ಬೆಂಗಳೂರು : ಸಚಿವ ಸಂತೋಷ್ ಲಾಡ್ ಅವರ ಬೆಂಗಳೂರಿನ ಸೆವೆನ್ ಕ್ವಾಟರ್ಸ್ ಮನೆಗೆ ಸಂಡೂರಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಭೇಟಿ ನೀಡಿದ್ದರು. ಸುಮಾರು 300- 400 ಕ್ಕೂ ಅಧಿಕ ಪಕ್ಷದ ಕಾರ್ಯಕರ್ತರು ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿ ಮುಂಬರುವ ಸಂಡೂರಿನ ಉಪ ಚುನಾವಣೆ ಕುರಿತು ಚರ್ಚಿಸಿದರು.

ಸಂಸದ ತುಕಾರಾಂ ಹಾಗೂ ಅವರ ಕುಟುಂಬದ ಸದಸ್ಯರನ್ನು ಹೊರತು ಪಡಿಸಿ ಬೇರೆ ಯಾವುದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೇಟ್ ನೀಡಲು‌ ಮನವಿ ಮಾಡಿದ್ದಾರೆ.

ಸಂಡೂರಿನ ಚುನಾವಣೆಯ ಕಣದಲ್ಲಿ ಸಚಿವ ಸಂತೋಷ್ ಲಾಡ್ ಅವರ ಪಾತ್ರ ನಿರ್ಣಾಯಕವಾಗಿದ್ದು, ಅವರು ಸೂಚಿಸಿದ ಅಭ್ಯರ್ಥಿಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದು ಕಾರ್ಯಕರ್ತರು ವಿಶ್ವಾಸ ತೋರಿದ್ದಾರೆ.

Edited By : Shivu K
PublicNext

PublicNext

18/10/2024 11:33 am

Cinque Terre

9.95 K

Cinque Terre

0

ಸಂಬಂಧಿತ ಸುದ್ದಿ