ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಡುಗಡೆ ಚಿಂತೆಗೆ ಬಿದ್ದ ನಟ ದರ್ಶನ್ - ತಮ್ಮನ ಜೊತೆಗೆ ಬೇಲ್ ಬಗ್ಗೆ ಚರ್ಚೆ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್‌ಗೆ ಬಿಡುಗಡೆ ಚಿಂತೆ ಎದುರಾಗಿದೆ. ಸದಾ ಶೂಟಿಂಗ್, ಓಡಾಟ, ಪಾರ್ಟಿ ಅಂತಾ ಕಾಲ ಕಳೆಯುತ್ತಿದ್ದ ದರ್ಶನ್ ಇದೀಗ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯೋಕೆ ಕಷ್ಟವಾಗುತ್ತಿದೆ. ಹೀಗಾಗಿ ಸಹೋದರನ ಭೇಟಿ ವೇಳೆ ಜೈಲಿನಿಂದ ಯಾವಾಗ ಬಿಡುಗಡೆ ಅಂತ ದರ್ಶನ್ ಚರ್ಚೆ ನಡೆಸಿದ್ದಾರೆ.

ದಿನಕರ್ ತೂಗುದೀಪ ಅವರು ಮೂರು ದಿನಗಳ ಹಿಂದೆ ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದರು. ಈ ವೇಳೆ ಜೊತೆಗೆ ಮುಕ್ತವಾಗಿ ಮಾತಾಡಿರುವ ದರ್ಶನ್, ಸ್ವಲ್ಪ ಆಕ್ಟೀವ್ ಆಗಿ ಓಡಾಡು, ಲೇಟ್ ಮಾಡಬೇಡ. ವಕೀಲರನ್ನು ಭೇಟಿ ಮಾಡ್ದಾ? ಏನ್ ಹೇಳಿದ್ರು? ಚಾರ್ಜ್ ಶೀಟ್ ಯಾವಾಗ ಹಾಕ್ತಾರೆ. ಲಾಯರ್ ಬೇಲ್‌ಗೆ ಯಾವಾಗ ಮೂವ್ ಮಾಡ್ತಾರಂತೆ. ಬೇಲ್ ಯಾವಾಗ ಸಿಗುತ್ತಂತೆ ಅಂತ ದಿನಕರ್ ಜೊತೆಗೆ ಮಾತುಕತೆ ನಡೆಸಿದ್ರಂತೆ.

Edited By : Vijay Kumar
PublicNext

PublicNext

26/07/2024 11:33 am

Cinque Terre

65.52 K

Cinque Terre

0