ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವುಮೆನ್ ಅಸೋಸಿಯೇಷನ್ ಬಗ್ಗೆ ಖಂಡಿತ ಧ್ವನಿ ಎತ್ತೋಣ ಎಂದ ನಟಿ ತಾರ

ಜಯನಗರ : ಇಂದು ಗೌರಿ ಗಣೇಶ ಹಬ್ಬದ ಆಚರಣೆ ಮುಗಿಲು ಮುಟ್ಟಿದೆ. ಗೌರಿ ಹಬ್ಬದ ವಿಶೇಷವಾಗಿ ಸಿ.ಕೆ ರಾಮಮೂರ್ತಿ ಅವರ ಮನೆಗೆ ಗೌರಿ ಹಬ್ಬಕ್ಕೆ ಹಿರಿಯ ನಟಿ ತಾರ ಅವರು ಭಾಗಿಯಾಗಿದ್ದರು. ಗೌರಿ ಪೂಜೆ ಬಳಿಕ ಬಾಗಿನ ಸ್ವೀಕರಿಸಿದರು.

ಬಳಿಕ, ಕನ್ನಡ ಚಿತ್ರರಂಗದಲ್ಲಿ ವುಮೆನ್ ಅಸೋಸಿಯೇಷನ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದಲ್ಲಿ ಇವತ್ತಿಗೂ ಬಾಂಧವ್ಯ ಇದೆ. ಎಲ್ಲರೂ ಪ್ರೀತಿ, ಅಣ್ಣ, ತಮ್ಮ ಬಾಂಧವ್ಯ ವಿಶ್ವಾಸದಿಂದ ಇದ್ದೇವೆ, ಇಲ್ಲಿಯವರೆಗೂ ಈ ತರಹದ್ದು ಕೇಳಿ ಬಂದಿಲ್ಲ. ಜೊತೆಗೆ ಇಂತಹ ಸಮಿತಿ ಬೇಕು ಅಂತ ಹೋಗಿರೋದು ತಪ್ಪಲ್ಲಾ. ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಸಾಧನೆ ಮಾಡಿದ್ದೇವೆ. ಇಂತಹ ಸಂದರ್ಭ ಬೇರೆ ಅವರಿಗೆ ಬಂದಿದ್ರೆ ಖಂಡಿತ ಧ್ವನಿ ಎತ್ತೋಣ ಎಂದರು.

Edited By : Suman K
PublicNext

PublicNext

06/09/2024 07:50 pm

Cinque Terre

69.85 K

Cinque Terre

3

ಸಂಬಂಧಿತ ಸುದ್ದಿ