ಹೊಸದುರ್ಗ : ಶಾಸಕ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮಂಡಳಿ, ಅಧ್ಯಕ್ಷರಾದ ಬಿ.ಜಿ.ಗೋವಿಂದಪ್ಪ ತಾಲೂಕಿನ ಕಂಚೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಕಂಚೀಪುರ ಗ್ರಾಪಂ ಮುದಿಯಪ್ಪನಹಟ್ಟಿ ಗ್ರಾಮದ ತಿಮ್ಮಪ್ಪ ಸ್ವಾಮಿ ಪ್ರಾರ್ಥನಾ ಮಂದಿರ 10 ಲಕ್ಷ,ಕಂಚೀಪುರ ಗ್ರಾ.ಪಂ ಬಾಲೇನಹಳ್ಳಿ,ಕಂಚೀಪುರ ಮುಖ್ಯರಸ್ತೆಯಿಂದ ಮುದಿಯಪ್ಪನ ಹಟ್ಟಿಯವರೆಗೆ ಸಿ.ಸಿ ರಸ್ತೆ 20 ಲಕ್ಷ,ಕಂಚೀಪುರ ಗ್ರಾ.ಪಂ ದೊಡ್ಡಕರ್ಪೂರದಕಟ್ಟೆ ಗ್ರಾಮದಲ್ಲಿ ಚರಂಡಿ ಮತ್ತು ಸಿ.ಸಿ ರಸ್ತೆ ನಿರ್ಮಾಣ 15 ಲಕ್ಷ
ಈ ಸಂದರ್ಭದಲ್ಲಿ ಹಲವು ಇಲಾಖೆಯ ಅಧಿಕಾರಿಗಳು ,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಗ್ರಾಮ ಪಂಚಾಯತಿ ಅಧ್ಯಕ್ಷರು,ಸದಸ್ಯರು,ಮತ್ತುಮುಖಂಡರು, ಕಾರ್ಯಕರ್ತರು ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.
Kshetra Samachara
04/02/2025 03:50 pm