ಗದಗ: ವೀರಭದ್ರೇಶ್ವರ ಸೇವಾ ಸಮಿತಿ ವತಿಯಿಂದ ಸಮೀಪದ ಬಳಗಾನೂರ ಗ್ರಾಮದ ಚಿಕ್ಕೆನಕೊಪ್ಪ ಮಠದ ಜಾತ್ರೆಯ ನಿಮಿತ್ತವಾಗಿ ರೋಣ ಪಟ್ಟಣದ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಮತ್ತು ಶರಣರ ಶಿಕ್ಷಣ ಸಮಿತಿಯ ಪದಾಧಿಕಾರಿಗಳು 881 ಕೆ.ಜಿ ಬೆಲ್ಲ,135 ಕೆ.ಜಿ ಒಳ್ಳೆ ಎಣ್ಣೆ, 200 ಕೆ.ಜಿ ಸಕ್ಕರೆಯನ್ನು ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಬಸವರಾಜ ಸುಂಕದ, ರಾಜೇಂದ್ರ ಗಿರಡ್ಡಿ, ತೋಟಪ್ಪ ನವಲಗುಂದ, ಅಂದಾನಗೌಡ್ರು ಲಿಂಗನಗೌಡರ, ಬರಮಗೌಡ್ರು ಲಿಂಗನಗೌಡರ, ವೀರೇಶ ಬಳ್ಳೊಳ್ಳಿ, ತಮ್ಮಣ್ಣ ಲಕ್ಷ್ಮೇಶ್ವರ ಸೇರಿದಂತೆ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.
Kshetra Samachara
02/02/2025 01:42 pm