ವಿಜಯಪುರ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಪ್ರಪಂಚದ ಹಿಂದೂಗಳಿಗೆ ನೋವು ಮಾಡಿದೆ ಕೂಡಲೇ ಸಮಸ್ತ ಹಿಂದೂಗಳಿಗೆ ಖರ್ಗೆ ಕ್ಷಮೆ ಕೇಳಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕುಂಭ ಮೇಳಕ್ಕೆ ಹೋಗದೆ ಹಿಂದೂಗಳ ಭಾವನೆಗೆ ಧಕ್ಕೆ ತರೋಕೆ ಅಧಿಕಾರ ಕೊಟ್ಟವರಾರು?ಏನು ಅಂದ್ರು ಹಿಂದೂಗಳು ಸುಮ್ಮನಿರ್ತಾರೆ, ಶಾಂತವಾಗಿರೋದೆ ಅವರ ದೌರ್ಬಲ್ಯ ಎಂದುಕೊಂಡಿದ್ದಾರೆ ಎಂದು ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಂಜು ಕಲಾಲ
ಪಬ್ಲಿಕ ನೆಕ್ಸ್ಟ ವಿಜಯಪುರ
PublicNext
29/01/2025 07:45 am