ಮೈಸೂರು : ಎರಡನೇ ಬಾರಿಗೆ ಸಿಎಂ ಆದ ಬಳಿಕ ತವರು ಕ್ಷೇತ್ರದಲ್ಲಿ ಭರ್ಜರಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯನವರಿಗೆ ಸನ್ಮಾನದ ಮಹಾಪೂರವೇ ನಡೆದಿದೆ. ವರುಣಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸಿಎಂ ಅವ್ರಿಗೆ ಗ್ರಾಮಸ್ಥರು, ಸ್ನೇಹಿತರು, ಮುಖಂಡರು ಸಾಲು ಸಾಲು ಹಾರಗಳನ್ನ ಹಾಕುವ ಮೂಲಕ ಸನ್ಮಾನ ಮಾಡಿದ್ದಾರೆ.
ಈ ಎಲ್ಲಾ ಸನ್ಮಾನಗಳನ್ನ ಸಿಎಂ ಸಿದ್ದರಾಮಯ್ಯನವರು, ನಗು ನಗುತ್ತಲೇ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಪುತ್ರ ದಿವಗಂತ ರಾಕೇಶ್ ಅವರ ಫೋಟೋ ನೀಡಿದ್ದು, ಸಿಎಂ ಸಂತಸಪಟ್ಟು ಕ್ಷೇತ್ರದ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.
PublicNext
22/10/2024 10:31 pm