ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ವೇದಿಕೆ ಮೇಲೆ ಏರಿದ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿದ ಯುವಕರು

ನಂಜನಗೂಡು: ನಂಜನಗೂಡು ನಗರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ ಮಾಡಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಸರ್ಕಾರಿ ಕಾರ್ಯಕ್ರಮದಲ್ಲಿ ವೇದಿಕೆಯಿಂದ ರಾಜಕಾರಣಿಗಳನ್ನು ಕೆಳಗಿಳಿಸಿ ಎಂದು ಮಾತಿನ ಚಕಮಕಿ ನಡೆದಿದೆ.

ವೇದಿಕೆ ಮೇಲೆ ಏರಿದ ರಾಜಕಾರಣಿಗಳಿಗೆ ಯುವಕರು ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮೂಗು ತೂರಿಸಿದ ರಾಜಕೀಯ ಮುಖಂಡರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಯೊಂದು ಕಾರ್ಯಕ್ರಮಗಳು ರಾಜಕೀಯ ವೇದಿಕೆಗಳಾಗುತ್ತಿವೆ.

ಸರ್ಕಾರಿ ಕಾರ್ಯಕ್ರಮಗಳು ರಾಜಕೀಯ ಮುಖಂಡರುಗಳ ವೇದಿಕೆಗಳಾಗಬಾರದು ಎಂದು ಕಿಡಿಕಾರಿದರು. ಶಾಸಕ ದರ್ಶನ್ ಧ್ರುವನಾರಾಯಣ್ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿವಹಿಸಿದ್ದರು. ಶಾಸಕರುಗಳ ಮುಂಭಾಗದಲ್ಲೇ ವೇದಿಕೆ ಏರಿದ ರಾಜಕೀಯ ಮುಖಂಡರುಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಮುಖಂಡರ ಆರ್ಭಟಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮೌನಕ್ಕೆ ಶರಣಾದರು.

Edited By : Vinayak Patil
Kshetra Samachara

Kshetra Samachara

17/10/2024 02:57 pm

Cinque Terre

16.52 K

Cinque Terre

0

ಸಂಬಂಧಿತ ಸುದ್ದಿ