ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಾಬುಸಾಬ್‌ ಪಾಳ್ಯ ಕಟ್ಟಡ ಕುಸಿತ ಪ್ರಕರಣ - ಓರ್ವ ಸಾವು, ಇದುವರೆಗೂ 13 ಕಾರ್ಮಿಕರ ರಕ್ಷಣೆ

ಬೆಂಗಳೂರು : ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ಅವಘಡಗಳು ಸಂಭವಿಸುತ್ತಿವೆ. ಹೆಣ್ಣೂರಿನ ಬಾಬುಸಾಬ್‌ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಬಿಹಾರ ಮೂಲದ ಟೈಲ್ಸ್ ಕಾರ್ಮಿಕ ಹರ್ಮನ್ ಮೃತಪಟ್ಟಿದ್ದಾನೆ.

ಕೂಲಿ ಕಾರ್ಮಿಕರು ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡ ನೀಡಿ ಅವಶೇಷಗಳನ್ನು ತೆಗೆಯುವ ಕೆಲಸ ನಡೆಸುತ್ತಿದ್ದಾರೆ.

ಈಗಾಗಲೇ 13 ಕಾರ್ಮಿಕರ ರಕ್ಷಣೆ ಮಾಡಲಾಗಿದ್ದು, ಇನ್ನೂ 7 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣೆಯಾದವರ ಪೈಕಿ 5 ಮಂದಿ‌ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಮಲ್ಲೇಶ್ವರಂನಲ್ಲಿ ವಾಸವಿದ್ದ ಆಂಧ್ರ ಮೂಲದ ವ್ಯಕ್ತಿ ಮುನಿರಾಜು ರೆಡ್ಡಿ ಎಂಬುವರಿಗೆ ಸೇರಿದ ಕಟ್ಟಡ ಇದಾಗಿದೆ.

ನಾಪತ್ತೆಯಾದವರು

1. ಮಹಮ್ಮದ್ ಅರ್ಮಾನ್ ಬಿಹಾರ

2. ಮಹಮ್ಮದ್ ಅಷೀದ್ ಬಿಹಾರ

3. ತಿರುಪಾಳಿ ಬಿಹಾರ

4. ಸೋಲೆ ಪಾಶ್ವನ್ ಬಿಹಾರ

5. ತುಳಸಿರೆಡ್ಡಿ ಚಿತ್ತೂರು

6. ಗಜೇಂದ್ರ ಚಿತ್ತೂರು

7. ವಳುಮಲೈ ಚಿತ್ತೂರು

ರಕ್ಷಿಸಿದ ಕಾರ್ಮಿಕರ ವಿವರ

1. ಅರ್ಮನ್ ಬಿಹಾರ ಮೂಲ

2. ಜಿಸಾನ್ ಬಿಹಾರ ಮೂಲ

3. ಮಹಮ್ಮದ್ ಸಾಹಿಲ್ ಬಿಹಾರ

4. ರಸೀದ್ ಬಿಹಾರ

5. ಸೀತಾರೆ ಬಿಹಾರ

6. ಇಲಿಫ್ ಬಿಹಾರ

7. ಸೋಹಿಲ್ ಬಿಹಾರ

8. ಪ್ರದೀಪ್ ರೆಡ್ಡಿ ಚಿತ್ತೂರು

ಗಾಯಾಳುಗಳು

1. ಜಗಮ್ಮ ಯಾದಗಿರಿ ಜಿಲ್ಲೆ

2. ಮಲ್ಲಪ್ಪ ಯಾದಗಿರಿ

3. ನಾಗರಾಜ್ ಯಾದಗಿರಿ

4. ರಮೇಶ್ ಕುಮಾರ್ ಬಿಹಾರ

5. ಪಾಶ್ವನ್ ಬಿಹಾರ ಮೂಲ

ಸಾವು

1. ಅರ್ಮನ್ 26 ವರ್ಷ ಬಿಹಾರ ಮೂಲ

Edited By : Abhishek Kamoji
PublicNext

PublicNext

22/10/2024 09:18 pm

Cinque Terre

9.71 K

Cinque Terre

0

ಸಂಬಂಧಿತ ಸುದ್ದಿ