ಶಿವಮೊಗ್ಗ : ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಬ್ರಿಗೇಡ್ ಗೆ ಸಂಕ್ರಾಂತಿಯ ಸಂದರ್ಭದಲ್ಲಿ ಹೆಸರಿಡುವ ಕುರಿತು ಚರ್ಚೆ ಆಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಕೂಡಲ ಸಂಗಮದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಬ್ರಿಗೇಡ್ ಹೆಸರಿಡಲಿದ್ದೇವೆ. ನಿನ್ನೆ ಸುಮಾರು ನೂರು ಜನ ಸ್ವಾಮೀಜಿಗಳು ಸೇರಿದ್ದರು. ಬ್ರಿಗೇಡ್ ಗೆ ಏನು ಹೆಸರಿಡಬೇಕು ಅಂತ ಚರ್ಚೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಿಂದೂಗಳ ರಕ್ಷಣೆಗೆ, ಹಿಂದುಳಿದವರ ಪರವಾಗಿ ಬ್ರಿಗೇಡ್ ಇರಲಿದೆ. ಸಾಧು ಸಂತರ ಮುಂದಾಳತ್ವದಲ್ಲಿ ಈ ಬ್ರಿಗೇಡ್ ನಡೆಯಲಿದೆ ಎಂದಿದ್ದಾರೆ. ಉಡುಪಿ ಶ್ರೀ ಕೃಷ್ಣ ಮಠಕ್ಕೂ ನಮಗೂ ಕೃಷ್ಣ ಮತ್ತು ಕನಕದಾಸರ ಸಂಬಂಧ ಇದೆ. ಹೊಸಪೇಟೆಗೆ ಶ್ರೀಗಳು ಹೋಗುತ್ತಿದ್ದರಂತೆ. ಹಾಗಾಗಿ ಸೌಹಾರ್ದಯುತವಾಗಿ ನಮ್ಮ ಮನೆಗೆ ಬಂದು ಹೋಗಿದ್ದಾರೆ ಎಂದರು.
ಇನ್ನು ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಮಗನಿಗೆ ಟಿಕೆಟ್ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಈಶ್ವರಪ್ಪ, ಆ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ.
PublicNext
21/10/2024 06:20 pm