ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಬೈರತಿ ಸುರೇಶ್ ಹೇಳಿಕೆ ಸ್ವಾಗತಿಸಿದ ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್

ಶಿವಮೊಗ್ಗ: ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿ ಸಾವಿನ ಬಗ್ಗೆ ಸಚಿವ ಬೈರತಿ ಸುರೇಶ್ ತನುಖೆಯಾಗಬೇಕು ಎಂದು ಆಗ್ರಹಿಸಿರುವುದನ್ನ ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ಸ್ವಾಗತಿಸಿದ್ದಾರೆ. ಭೈರತಿ ಸುರೇಶ್ ರಿಗೆ ಈ ಅನುಮಾನ ಬರಲು ಕೆ.ಎಸ್. ಈಶ್ವರಪ್ಪರ ಹೇಳಿಕೆ ಕಾರಣ ಇರಬಹುದು. ಹೀಗಾಗಿ ಈ ರೀತಿ ಹೇಳಿಕೆ ನೀಡಿರಬಹುದು ಎಂದಿದ್ದಾರೆ.

ಈಶ್ವರಪ್ಪನವರು ಈ ಹಿಂದೆ ಯಡಿಯೂರಪ್ಪರ ಎದೆ ಬಗೆದರೆ ಒಂದು ಕಡೆ ಅವರ ಮಕ್ಕಳು ಮತ್ತೊಂದು ಕಡೆ ಶೋಭಾ ಕರಂದ್ಲಾಜೆ ಕಾಣುತ್ತಾರೆ ಎಂದು ಹೇಳಿದ್ದರು. ಹೀಗಾಗಿ ಸುರೇಶ್‌ರವರಿಗೆ ಶೋಭಾ ಮೇಲೆ ಅನುಮಾನ ಮೂಡಿ ತನಿಖೆಗೆ ಆಗ್ರಹಿಸಿರಬಹುದು. ಮೈತ್ರಾದೇವಿ ಸದ್ಗತಿ ಕಂಡಿದ್ದಾರೆ. ಆ ಮಹಾತಾಯಿ ಬಗ್ಗೆ ಚರ್ಚೆ ಅಗತ್ಯವಿಲ್ಲ. ಬೈರತಿ ಸುರೇಶ್ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಲು ಸಂಸದ ಬಿ.ವೈ. ರಾಘವೇಂದ್ರ ಅರ್ಹರು. ಅದೇ ರೀತಿ ಭೈರತಿ ಸುರೇಶ್ ತನಿಖೆಗೆ ಆಗ್ರಹಿಸಿರುವುದಕ್ಕೆ ಅವರು ಕೂಡ ಸ್ವತಂತ್ರರು. ಎರಡೂ ವಿಚಾರದ ಬಗ್ಗೆ ತನಿಖೆಯಾಗಲಿ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.

Edited By : Suman K
PublicNext

PublicNext

21/10/2024 01:20 pm

Cinque Terre

12.42 K

Cinque Terre

0

ಸಂಬಂಧಿತ ಸುದ್ದಿ