ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಒಳ್ಳೆ ಉದ್ದೇಶಕ್ಕೆ ಬಸ್ ನಿಲ್ದಾಣದ ಪ್ಲಾಟ್ ಪಾರ್ಮ್ ವರೆಗೆ ಆಟೋ ಬಿಡಲು ಮನವಿ ಸಲ್ಲಿಸಿದ ಆಟೋ ಚಾಲಕರು

ಹುಬ್ಬಳ್ಳಿ : ಆಟೋರಿಕ್ಷಾದಲ್ಲಿ ಬಂದಂತಹ ಅಂಗವಿಕಲರಿಗೆ, ಗರ್ಭಿಣಿಯರಿಗೆ, ವಯೋವೃದ್ಧರಿಗೆ, ನಡೆದಾಡಲು ಬರದೆ ಇರುವಂತಹ ರೋಗಿಗಳಿಗೆ ಬಸ್ ಹತ್ತಲು ಆಟೋ ಚಾಲಕರಿಗೆ ಬಸ್ ಪ್ಲಾಟ್ ಫಾರ್ಮ್‌ ವರೆಗೆ ಅವಕಾಶ ನೀಡುವಂತೆ, ಶ್ರಮಜೀವಿ ಆಟೋರಿಕ್ಷಾ ಚಾಲಕರ ಸಂಘದ ವತಿಯಿಂದ ಹೊಸೂರು ಹೊಸ ಬಸ್ ನಿಲ್ದಾಣದ ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ಪ್ರಸ್ತುತ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಹೋಂ ಗಾರ್ಡ್ ಇಂತಹ ಪ್ರಯಾಣಿಕರು ಹತ್ತಿದ ಆಟೋಗಳನ್ನು ಕೂಡ ಒಳಗೆ ಬಿಡುವುದಿಲ್ಲ. ಎಲ್ಲ ಆಟೋ ಚಾಲಕರು ತಾವು ನಿಗದಿ ಪಡಿಸಿದ ಸ್ಥಳದಲ್ಲಿ ಈ ಅಸಹಾಯಕ ಪ್ರಯಾಣಿಕರನ್ನು ಇಳಿಸಿ ಹೋಗಿ ಬಿಡುತ್ತಾರೆ. ಆದರೆ, ಇಂತಹ ದುಸ್ಥಿತಿಯಲ್ಲಿರುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಅದಕ್ಕಾಗಿ ಪ್ಲಾಟ್ ಪಾರ್ಮ್ ವರೆಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದರು.

Edited By : Vinayak Patil
Kshetra Samachara

Kshetra Samachara

21/10/2024 06:09 pm

Cinque Terre

19.37 K

Cinque Terre

6

ಸಂಬಂಧಿತ ಸುದ್ದಿ