ಕುಂದಗೋಳ: ನಗರದಲ್ಲಿ ದುಡಿದು, ಶಿಕ್ಷಣ ಕಲಿತು ಇನ್ನಿತರೆ ಕರ್ತವ್ಯ ಮುಗಿಸಿ ಸಂಜೆ ಮನೆಗೆ ಸೇರಬೇಕಾದ ಪ್ರಯಾಣಿಕರನ್ನೂ ಊರಿಗೆ ತಲುಪಿಸಬೇಕಾದ ಸಾರಿಗೆ ಬಸ್ ನ ಹೆಡ್ ಲೈಟ್ ಸರಿ ಇಲ್ಲದೆ ಅರ್ಧ ದಾರಿಯಲ್ಲೇ ಕೈ ಕೊಟ್ಟ ಪರಿಣಾಮ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಹೌದು ! ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ಕುಂದಗೋಳ ಮೂಲಕ ವಿವಿಧ ಹಳ್ಳಿಗಳ ಮಾರ್ಗವಾಗಿ ತರ್ಲಘಟ್ಟ ತಲುಪಬೇಕಿದ್ದ ಕೆಎ-25 F-3141 ಸಂಖ್ಯೆಯ ಸಾರಿಗೆ ಬಸ್ ನ ಹೆಡ್ ಲೈಟ್ ತಾಂತ್ರಿಕ ದೋಷದಿಂದ ದಾರಿ ಮಧ್ಯೆಯೇ ಕೈ ಕೊಟ್ಟಿದೆ. ಈ ಪರಿಣಾಮ 122 ಪ್ರಯಾಣಿಕರನ್ನು ಕರೆದುಕೊಂಡು ತರ್ಲಘಟ್ಟಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಹರಭಟ್ಟ ಕಾಲೇಜು ಬಳಿ ತಟಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರು, ಮಕ್ಕಳು, ವಿದ್ಯಾರ್ಥಿಗಳು, ನಾಗರಿಕರು ನಡುರಸ್ತೆಯಲ್ಲಿ ಸಮಸ್ಯೆಗೆ ಸಿಲುಕಿ ಏನಂದ್ರು ಕೇಳಿ...
ಒಟ್ಟಾರೆ ಸಾರಿಗೆ ಬಸ್ ಅವ್ಯವಸ್ಥೆ ಚಾಲಕ, ನಿರ್ವಾಹಕ ಸೇರಿದಂತೆ ಪ್ರಯಾಣಿಕರನ್ನೂ ಸಹ ನಡುರಸ್ತೆಗೆ ತಂದು ನಿಲ್ಲಿಸಿದೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
20/10/2024 09:32 am