ಕುಂದಗೋಳ : ಧಾರಾಕಾರ ಮಳೆಯ ರಭಸಕ್ಕೆ ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ ಹಂಚಿನಾಳ ಗ್ರಾಮದ ಜನರನ್ನೂ ಶಾಸಕ ಎಂ.ಆರ್.ಪಾಟೀಲ್ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದ ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿ ಹಲವು ಜನರು ಮನೆ ಕಳೆದುಕೊಂಡಿದ್ದರು.
ಇನ್ನೂ ಬಹುತೇಕ ಕೃಷಿ ಭೂಮಿಯಲ್ಲಿನ ಬೆಳೆಗಳು ಸಹ ಹಾಳಾಗಿದ್ದನ್ನೂ ಸ್ವತಃ ಶಾಸಕರೇ ರೈತಾಪಿ ಜನರ ಜಮೀನುಗಳಿಗೆ ತಹಶೀಲ್ದಾರ್ ರಾಜು ಮಾವರಕರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹದ ಭೀತಿಗೆ ಒಳಗಾಗುವ ಹಂಚಿನಾಳ ಗ್ರಾಮದ ಜನರ ಅಹವಲನ್ನೂ ಆಲಿಸಿ ಗ್ರಾಮ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ತರುತ್ತೇನೆ ಎಂಬ ವಿಶ್ವಾಸ ನೀಡಿದ್ದಾರೆ.
ಸದ್ಯ ಹಂಚಿನಾಳ ಗ್ರಾಮದ ಜನರ ಮಳೆಗಾಲದ ಕಷ್ಟಕ್ಕೆ ಪರಿಹಾರ ಸಿಕ್ಕರೆ ಸಾಕಾಗಿದೆ.
Kshetra Samachara
21/10/2024 07:44 pm