ಯಲ್ಲಾಪುರ: ಪಟ್ಟಣದ ಹುಬ್ಬಳ್ಳಿ ರಸ್ತೆಯ ಭಾಗವತ ಚಾಳದ ಗೋಪಾಲಕೃಷ್ಣ ನಾಗೇಶ ಭಾಗವತ ಅವರ ಮನೆಯ ಗೋಡೆಯನ್ನು ಒಡೆದು, ಮನೆಯೊಳಗಿದ್ದ 20 ಕ್ವಿಂಟಾಲ್ ಒಣ ಅಡಿಕೆಯನ್ನು ಕದ್ದೊಯ್ದ ಪ್ರಕರಣದ ತನಿಖೆ ನಡೆಸಿದ ಯಲ್ಲಾಪುರ ಪೊಲೀಸರು ಅಡಿಕೆ ಕದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಯಲ್ಲಾಪುರ ಪಟ್ಟಣದ ಕಾಳಮ್ಮನಗರದ ಕೂಲಿ ಕೆಲಸದ ಮಂಜುನಾಥ ಮುನ್ನಾ ತಂದೆ ಮಹೇಶ ಸಿದ್ದಿ (20 ವರ್ಷ) ಎಂದು ಗುರುತಿಸಲಾಗಿದೆ. ಈತನನ್ನು ವಶಕ್ಕೆ ಪಡೆದು ಪೊಲೀಸರು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಈತನು ತನ್ನ ಸಹಚರರೊಂದಿಗೆ ಅಡಿಕೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಆರೋಪಿಯಿಂದ 1 ಕ್ವಿಂಟಾಲ್ 92 ಕೆಜಿ 740 ಗ್ರಾಂ ಕಳ್ಳತನ ಮಾಡಿದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Kshetra Samachara
21/10/2024 01:40 pm