ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ : ತೋಟದಲ್ಲಿ ಚಿರತೆ ಪತ್ತೆ.. ಸ್ಥಳೀಯರಲ್ಲಿ ಮತ್ತೆ ಆತಂಕ

ಮುಲ್ಕಿ: ನಗರ ಪಂಚಾಯತ್ ವ್ಯಾಪ್ತಿಯ ಅಕ್ಕಸಾಲಿಗರ ಸದಾನಂದ ಕೋಟ್ಯಾನ್ ರವರ ಮನೆಯ ಅಡುಗೆ ಕೋಣೆಯಲ್ಲಿ ಪತ್ತೆಯಾದ ಚಿರತೆಯನ್ನು ಶನಿವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳು ಬೋನ್ ನಲ್ಲಿ ಸೆರೆ ಹಿಡಿದು ಕೊಂಡು ಹೋದ ಕ್ಷಣಾರ್ಧದ ದಿನದಲ್ಲಿ ಇನ್ನೊಂದು ಚಿರತೆ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಮತ್ತೆ ಆತಂಕ ಮೂಡಿಸಿದೆ.

ಅಕ್ಕಸಾಲಿಗರಕೇರಿ ಬಳಿಯ ನಿವಾಸಿ ನಾಗರಾಜ ಆಚಾರ್ಯ ಎಂಬುವರ ಮನೆ ಪರಿಸರದಲ್ಲಿ ಭಾನುವಾರ ಸಂಜೆ ಚಿರತೆ ಪತ್ತೆಯಾಗಿದ್ದು ಪರಿಸರದಲ್ಲಿ ನಾಯಿ ಬೊಗಳುತ್ತಿರುವ ಶಬ್ದ ಕಂಡು ಸಿ ಸಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಚಿರತೆ ಹಾದುಹೋಗಿರುವುದು ಕಂಡುಬಂದಿದೆ ಬಳಿಕ ಇದೇ ಚಿರತೆ ಸದಾನಂದ ಕೋಟ್ಯಾನ್ ಅವರ ಪಕ್ಕದ ಮನೆಯ ತೋಟದಲ್ಲಿ ಕೂಡ ಕಂಡು ಬಂದಿದ್ದು ಇದೇ ಪರಿಸರದಲ್ಲಿ ತಿರುಗಾಡುತ್ತಿದೆ ಎಂದು ಸ್ಥಳೀಯರು ಆತಂಕದಿಂದ ಹೇಳಿದ್ದಾರೆ.

ಮತ್ತೆ ಚಿರತೆ ಓಡಾಟದಿಂದ ಸ್ಥಳೀಯರು ಭಯಭೀತರಾಗಿದ್ದು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

20/10/2024 10:32 pm

Cinque Terre

2.76 K

Cinque Terre

0

ಸಂಬಂಧಿತ ಸುದ್ದಿ