ಕೋಲಾರ : ಕೋಲಾರದಲ್ಲಿ ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದ ಮಹಿಳೆ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಮಲವಾರಿಪಲ್ಲಿಯ ಶಾಂತಮ್ಮ (35) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಶವದೊಂದಿಗೆ ಆಸ್ಪತ್ರೆ ಎದುರು ಸಂಬಂದಿಕರು ಪ್ರತಿಭಟನೆ ನಡೆಸಿದ್ದು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ಶ್ರೀನಿವಾಸಪುರದ ಪವನ್ ಆಸ್ಪತ್ರೆ ಎದುರು ಮೃತ ಶಾಂತಮ್ಮ ಕುಂಟುಂಬಸ್ಥರು ಪ್ರತಿಭಟನೆ ನಡೆಸಿದ್ದು, ಗರ್ಭಕೋಶ ಕಾಯಿಲೆ ಸಂಬಂಧ ಚಿಕಿತ್ಸೆ ಪಡೆಯಲು ಬಂದಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ. ಅವರ ಯಡವಟ್ಟಿನಿಂದ ಶಾಂತಮ್ಮ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಡಾ. ವೇಣುಗೋಪಾಲ್ ಹಾಗೂ ಅವರ ಪತ್ನಿ ಡಾ. ಕವಿತ ನಿರ್ಲಕ್ಷದಿಂದದಲೇ ಸಾವು ಸಂಭವಿಸಿದೆ ಎಂದು ದೂರಲಾಗಿದೆ. ಶನಿವಾರ ರಾತ್ರಿ ಇಡಿ ಶವದೊಂದಿಗೆ ಆಸ್ಪತ್ರೆ ಎದುರು ಪ್ರತಿಭಟನೆ ಮಾಡಲಾಗಿದ್ದು, ವೈದ್ಯರಾದ ವೇಣುಗೋಪಾಲ್ ಹಾಗೂ ಕವಿತ ವಿರುದ್ದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
PublicNext
20/10/2024 04:21 pm