ಕೋಲಾರ - ಗಲ್ ಪೇಟೆ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನಗಳ ಕಳ್ಳನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಂಧ್ರ ಪ್ರದೇಶದ ಕುಪ್ಪಂ ಮಂಡಲದ ಲಕ್ಷ್ಮೀಪುರ ನಿವಾಸಿ ಮಹೇಶ್ ಬಂಧಿತ ಆರೋಪಿಯಾಗಿದ್ದಾನೆ.
ನಗರ ಹೊರವಲಯದ ಬೇತಮಂಗಲ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ವಾಹನಗಳ ದಾಖಲೆ ಪರಿಶೀಲನೆ ಮಾಡುತ್ತಿದ್ದ ವೇಳೆ ಕೋಲಾರ ಕಡೆಯಿಂದ ಬುಲೆಟ್ ವಾಹನ ಬಂದಿದ್ದು, ಹಿಂದೆ ಹಾಗೂ ಮುಂದೆ ನಂಬರ್ ಪ್ಲೇಟಗಳು ಇರಲಿಲ್ಲ ಅಲ್ಲದೆ ಪೊಲೀಸರು ತಡದರು ಸವಾರ ನಿಲ್ಲಿಸದೇ ಹೋಗಿದ್ದಾನೆ. ಬಳಿಕ ಹಿಂಬಾಲಿಸಿಕೊಂಡು ಹೋಗಿ ಹಿಡಿದು ಪರಿಶೀಲಿಸಿದಾಗ ತಮಿಳುನಾಡು ರಾಜ್ಯದ ನೊಂದಣಿಯ ನಂಬರ್ ಪ್ಲೇಟ್ ಗಳು ಪತ್ತೆಯಾಗಿವೆ. ಆದರೆ ದಾಖಲೆಗಳು ಲಭ್ಯವಿರಲಿಲ್ಲ ಕೂಡಲೇ ವಶಕ್ಕೆ ಪಡೆದು ವಿಚಾರಿಸಿದಾಗ 2 ವಾಹನಗಳನ್ನು ಕಳುವು ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾನೆ.
Kshetra Samachara
17/10/2024 09:19 pm