ಮುಲ್ಕಿ : ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಅಕ್ಟೋಬರ್ 27 ರಂದು ನಡೆಯುವ ಹೊಸಕ್ಕಿ ನಡಾವಳಿ(ತುಲಾಪತ್)ಯ ಪ್ರಯುಕ್ತ ಕದಿಕೆ ಭಂಡಾರ ಮಂದಿರದಲ್ಲಿ ಗೊನೆ ಮುಹೂರ್ತ ಸಮಾರಂಭ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಶ್ರೀನಿವಾಸ ಯಾನೆ ಅಪ್ಪು ಪೂಜಾರಿರವರು ವಿಶೇಷ ಪ್ರಾರ್ಥನೆ ನಡೆಸಿ ಗೋನೆಮೂರ್ತ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಅರ್ಚಕವೃಂದ ದವರು ಮತ್ತು ಏಳೂರ ಗುರಿಕಾರರು, ದೇವಸ್ಥಾನದ ಅಧ್ಯಕ್ಷ ವಾಮನ ಇಡ್ಯ, ಕದಿಕೆ ತೀಯಾ ಸಂಘದ ಅಧ್ಯಕ್ಷ ಸುರೇಶ ಬಂಗೇರ, ಹಾಗೂ ಊರ ಪರಊರ ಭಕ್ತಾದಿಗಳು ಉಪಸ್ಥಿತರಿದ್ದರು.
PublicNext
18/10/2024 02:40 pm