ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ ಕೊಪ್ಪ ತಾಲೂಕಿನ ಜೈಪುರ ಪಟ್ಟಣದಲ್ಲಿ ಬೀದಿ ನಾಯಿಗಳಿಂದ ಮಹಿಳೆಯರು ಮಕ್ಕಳು ಭಯದಲ್ಲಿ ಓಡಾಡುವಂತಾಗಿದೆ.
ಜಯಪುರ ಬಸ್ ನಿಲ್ದಾಣದಲ್ಲಿ 20 ಕ್ಕೂ ಹೆಚ್ಚು ಬೀದಿ ನಾಯಿಗಳು ಕ್ಯಾಂಪ್ ಹಾಕಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತಿವೆ. ಅಲ್ಲದೇ ಈ ಮಾರ್ಗದಲ್ಲಿ ಪ್ರತಿನಿತ್ಯ ಶೃಂಗೇರಿಗೆ ನೂರಾರು ವಾಹನಗಳು ಸಂಚರಿಸುತ್ತವೆ ವಾಹನಗಳಿಗೂ ಏಕಾಏಕಿ ಅಡ್ಡ ಬರುತ್ತಿರುವ ಬೀದಿನಾಯಿಗಳಿಂದ ಅಪಘಾತಗಳು ಸಂಭವಿಸುತ್ತಿವೆ.
ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ರು ಪ್ರಯೋಜನ ಆಗ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
Kshetra Samachara
18/10/2024 01:42 pm