ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಬೈಕ್ ವಿಚಾರಕ್ಕೇ ಸ್ನೇಹಿತರ ನಡುವೆ ದುಸ್ಮನಿ ಎರಡು ವರ್ಷಗಳ ನಂತರ ಕೊಲೆಯಲ್ಲಿ ಅಂತ್ಯ

ಹುಬ್ಬಳ್ಳಿ : ಕಳೆದ ಶುಕ್ರವಾರ ಹುಬ್ಬಳ್ಳಿಯ ಗೋಪನಕೊಪ್ಪದಲ್ಲಿ ಶಿವರಾಜ ಎಂಬ ಯುವಕನ ಕೊಲೆಯ ವಿಚಾರಕ್ಕೆ ಸಂಬಂಧಿಸಿದಂತೆ ಗೆಳೆಯರ ನಡುವಿನ ಹಳೆಯ ದ್ವೇಷವೇ ಕೊಲೆಗೆ ಕಾರಣ ಎಂಬ ಮಾಹಿತಿ ಪೊಲೀಸ್ ಮೂಲದಿಂದ ತಿಳಿದು ಬಂದಿದೆ.

ಕೊಲೆಯಾದ ಶಿವರಾಜ ಹಾಗೂ ಕೊಲೆಯ ಆರೋಪಿ ಯಾಗಿರುವ ಸಂದೀಪ್ ಸ್ನೇಹಿತರು ಆದ್ರೆ ಕಳೆದ 2 ವರ್ಷಗಳ ಹಿಂದೆ ಸಂದೀಪ್'ನ ಬೈಕ್ ತೆಗೆದುಕೊಂಡು ಹೋಗಿದ್ದ ಶಿವರಾಜ ಅಪಘಾತ ಮಾಡಿಕೊಂಡು ಬಂದಿದ್ದ ಆಗ ಸಂದೀಪ್ ಶಿವರಾಜನಿಗೆ ಬೈಕ್ ರಿಪೇರಿ ಮಾಡಿಸಿ ಕೊಡು ಎಂದಿದ್ದ ಆದ್ರೆ ಶಿವರಾಜ ನಾನು ಮಾಡಿಸಿಕೊಡೋದಿಲ್ಲ ಎಂದಿದ್ದ ಹೀಗಾಗಿ ಇಬರಿಬ್ಬರ ನಡುವೆ ಕಳೆದ ಎರಡು ವರ್ಷಗಳಿಂದ ಮನಸ್ತಾಪ ಏರ್ಪಟ್ಟಿತ್ತು.

ಅಷ್ಟೇ ಅಲ್ಲದೆ ಇಬ್ಬರ ನಡುವೆ ಹೊಡೆದಾಟ ಕೂಡ ನಡೆದಿತ್ತು ಒಂದು ವರ್ಷದ ಹಿಂದೆ ಕೂಡಾ ಶಿವರಾಜ ಸಂದೀಪ್ ಮನೆಗೆ ಹೋಗಿ ಸಂದೀಪ್ ನನ್ನು ಹೊಡೆದಿದ್ದ. ಈ ಸಿಟ್ಟು ಸಂದೀಪ್ ನಲ್ಲಿ ಹಾಗೆಯೇ ಇತ್ತು. ಕೊಲೆಯಾಗುವ ಹಿಂದಿನ ದಿನ ಕೂಡ ಕರಿಯಮ್ಮ ದೇವಿ ದೇವಸ್ಥನಾದ ಜಾತ್ರಾ ಮಹೋತ್ಸವದಲ್ಲಿ ಗಲಾಟೆ ಆಗಿತ್ತು. ಆಗಲು ಶಿವರಾಜ ಸಂದೀಪ್ ನನ್ನು ಹೊಡೆದಿದ್ದ ಹೀಗಾಗಿ ಈತನಿಗೆ ಗತಿ ಕಾಣಿಸಲು ಸಂದೀಪ್ ಕಾಯುತ್ತಿದ್ದ.

ಶುಕ್ರವಾರ ಈತನಿಗೆ ಗತಿ ಕಾಣಿಸಬೇಕು ಅಂತಾ ಕಾಯುತ್ತಿದ್ದ ಸಂದೀಪ್ ಬೆಳ್ಳಿಗ್ಗೆಯಿಂದಲೇ ತನ್ನ ಸ್ನೇಹಿತರ ಜೊತೆ ಕಾಯುತ್ತಿದ್ದ ಆದ್ರೆ ಶಿವರಾಜ ಕೈಗೆ ಸಿಕ್ಕಿರಲಿಲ್ಲ, ರಾತ್ರಿ ಊಟ ಮುಗಿಸಿ ಗೋಪನಕೊಪ್ಪ ಸರ್ಕಲ್ ಬಳಿ ಶಿವರಾಜ ಬಂದಾಗ ಬೆಳ್ಳಿಗ್ಗೆಯಿಂದಲೇ ಈತನ ಬಲಿಗಾಗಿ ಕಾದಿದ್ದ ಸಂದೀಪ್ ತನ್ನ ಗೆಳೆಯರ ಜೊತೆ ಸೇರಿ 32 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ಕೂಡ ಹಲವು ಆಯಾಮಗಳಿಂದ ತನಿಖೆಯನ್ನು ಕೂಡಾ ಇದೀಗ ಮುಂದುವರೆಸಿದ್ದಾರೆ.

-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

18/10/2024 12:08 pm

Cinque Terre

30.24 K

Cinque Terre

3

ಸಂಬಂಧಿತ ಸುದ್ದಿ