ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ವಿದ್ಯುತ್ ಪ್ರವಹಿಸಿ ಹಸು ಸಾವು

ಚಿತ್ರದುರ್ಗ: ಸಿರಿಗೆರೆಯ ಶ್ರೀ ಜಗದ್ಗುರು ತಳಬಾಳು ಜಗದ್ಗುರು ಬೃಹನ್ ಮಠದ ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಟಿಸಿಗೆ ಮಳೆಗೆ ವಿದ್ಯುತ್ತು ಟಿಸಿಯು ತೇವಾಂಶದಿಂದ ಪಕ್ಕದಲ್ಲಿ ಹಾಲ ಹೋಗುತ್ತಿದ್ದ ಹಸುವು ವಿದ್ಯುತ್ ಪ್ರವಹಿಸಿ ಸಾವನ್ನಪಿದೆ.

ರಸ್ತೆಯ ಪಕ್ಕದಲ್ಲಿ ಕಂಟಕವಾಗಿರುವ ವಿದ್ಯುತ್ ದೇಶವನ್ನು ಸ್ಥಳಾಂತರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಗ್ರಾಮಸ್ಥರು ಅನೇಕ ಬಾರಿ ಸೂಚಿಸಿದರು ಸಹ ಅವರು ಸೂಕ್ತ ಕ್ರಮ ಕೈಗೊಂಡಿರಲಿಲ್ಲ ಪಕ್ಕದಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆ ಇದ್ದು, ಕಾಂಪೌಂಡಿದೆ ಇದರಿಂದ ಮಕ್ಕಳಿಗೂ ಸಹ ತೊಂದರೆ ಹಾಗೂ ವಾಹನ ಸವಾರಿಗು ಸಹ ಭಯದ ವಾತಾವರಣ ನಿರ್ಮಾಣವಾಗುತ್ತಿರುತ್ತದೆ.

ನಾಗರಾಜ್ ಎಂಬುವರಿಗೆ ಸೇರಿದ ಹಸು ವಿದ್ಯುತ್ ಗೆ ಬಲಿಯಾಗಿದ್ದರಿಂದ ಪರಿಹಾರಕ್ಕಾಗಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದ ಬೆಸ್ಕಾಂ ಶಾಕಾಧಿಕಾರಿ, ಜಿಲ್ಲಾ ಅಧಿಕಾರಿಗಳಿಗೆ ತಿಳಿಸಿ ಪರಿಹಾರ ನೀಡುವ ಭರವಸೆ ನೀಡಿದರು. ಜೊತೆಗೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಸುವಿನ ಹೆಸರಲ್ಲಿ ವಿಮೆ ಮಾಡಿಸಲಾಗಿದೆ ಎಂದು ನಾಗರಾಜ್ ತಿಳಿಸಿದರು.

Edited By : Nagaraj Tulugeri
Kshetra Samachara

Kshetra Samachara

17/10/2024 09:14 pm

Cinque Terre

3.2 K

Cinque Terre

0

ಸಂಬಂಧಿತ ಸುದ್ದಿ