ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರರ್ಗ ಶಿವಮೂರ್ತಿ ಮುರುಘಾ ಶರಣರ ಪರ ಜೈಕಾರಕ್ಕೆ‌ ಖಂಡನೆ

ಚಿತ್ರದುರರ್ಗ- ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿ ಸಧ್ಯ ಜಾಮೀನು ಪಡೆದು ಜೈಲಿಂದ ಹಿರುಗಿದ ಶಿವಮೂರ್ತಿ ಮುರುಘಾ ಶರಣರನ್ನು ಭಕ್ತರು ಮಾಲಾರ್ಪಣೆ ಮಾಡಿ ಸ್ವಾಗತಿಸಿದ್ದು, ಬಸವತತ್ವಕ್ಕೆ ವಿರೋಧವಾಗಿದ್ದು ಅಂತಾ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಕಿಡಿಕಾರಿದ್ದಾರೆ.

ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾತನಾಡಿದ ಮಾರಸಂದ್ರ ಮುನಿಯಪ್ಪ, ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಶಿವಮೂರ್ತಿ ಮುರುಘಾ ಶರಣರು ಇತ್ತೀಚೆಗೆ ಜೈಲಿಂದ ಜಾಮೀನು ಮೇಲೆ‌ ಬಿಡುಗಡೆಯಾದ್ರು. ಈ ವೇಳೆ ಅವರ ಭಕ್ತರು ಅವರನ್ನು ಸ್ವತಂತ್ಯ ಹೋರಾಟಗಾರರನ್ನು ಸ್ವಾಗತಿಸಿದಂತೆ ಮಾಲಾರ್ಪಣೆ ಮಾಡಿ, ಜೈಕಾರ ಹಾಕಿ ಸ್ವಾಗತಿಸಿದ್ದು, ಬಸವತತ್ವಕ್ಕೆ ವಿರೋಧವಾದುದು. ನಾವಿದನ್ನು ಖಂಡಿಸುತ್ತೇವೆ. ರಾಜ್ಯ ಸರಕಾರ ಇದ್ಯಾವುದಕ್ಕೂ ಹೆದರದೇ ಬೇಲ್ ರದ್ದು ಮಾಡಲು ಮನವಿ ಮಾಡಬೇಕು ಅಂತಾ ಆಗ್ರಹಿಸಿದ್ದಾರೆ.

Edited By : Ashok M
PublicNext

PublicNext

15/10/2024 10:34 am

Cinque Terre

20.33 K

Cinque Terre

0

ಸಂಬಂಧಿತ ಸುದ್ದಿ