ಮೊಳಕಾಲ್ಮೂರು: ಹೆಂಡತಿಯ ಸಾವಿನಿಂದ ಮನನೊಂದು ನೇಣು ಬಿಗಿದುಕೊಂಡು ವೃದ್ಧನೋರ್ವ ಸಾವನ್ನಪ್ಪಿರುವಹ ಘಟನೆ ಮೊಳಕಾಲ್ಮುರು ಪಟ್ಟಣದ ಎನ್ಎಂಎಸ್ ಬಡಾವಣೆಯಲ್ಲಿ ಕಳೆದ ರಾತ್ರಿಯಂದು ನಡೆದಿದೆ.
ಶಿವಣ್ಣ(70) ಗೌರಮ್ಮ (60)ವರ್ಷ ಈ ಇಬ್ಬರೂ ವೃದ್ಧ ದಂಪತಿ ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ಮೂಲದವರಾಗಿರು. ಸುಮಾರು 15 ವರ್ಷಗಳ ಹಿಂದೆ ಕೂಲಿ ಅರಸಿ ಮೊಳಕಾಲ್ಮುರು ಪಟ್ಟಣದ ಎನ್ಎಂಎಸ್ ಬಡಾವಣೆಯಲ್ಲಿ ವಾಸವಾಗಿ ಕೈಮಗ್ಗ ಕೆಲಸ ಮಾಡುತ್ತಿದ್ದರು.
ಮೃತ ಗೌರಮ್ಮ 8 ವರ್ಷಗಳ ಹಿಂದೆ ಪ್ಯಾರಲಿಸಿಸ್ ನಿಂದ ಹಾಸಿಗೆ ಹಿಡಿದಿದ್ರು. ಆದ್ರೆ ಕಳೆದ ಹೆಂಡತಿ ಸಾವನ್ನಪ್ಪಿರುವುದನ್ನು ಮನಗಂಡ ವೃದ್ಧ ಶಿವಣ್ಣ ತಾನು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಸಿಪಿಐ ವಸಂತ ಅಸೋದೆ ಮತ್ತು ಕ್ರೈಂ ಪಿಎಸ್ಐ ಈರೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದಂಪತಿಯ ಸಂಬಂಧಿಕರು ಶವಸಂಸ್ಕಾರಕ್ಕೆ ಬರಲು ನಿರಾಕರಿಸಿದ್ದಾರೆ. ಹೀಗಾಗಿ ಇವರಿಗೆ ಕೆಲಸ ನೀಡಿದ್ದ ರೇಷ್ಮೆ ಸೀರೆ ನೇಕಾರ ರಾಜಶೇಖರ್ ಎಂಬುವವರು ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದಾರೆ.
ವರದಿ:-ಹೆಚ್ ಮಹಾಂತೇಶ್ ರಾಯಾಪುರ
PublicNext
15/10/2024 05:04 pm