ಚಿತ್ರದುರ್ಗ: ದರ್ಶನ್ ಅವರ ಬೇಲ್ ಅರ್ಜಿಯನ್ನು ಕೋರ್ಟ್ ವಜಾ ಮಾಡಿರುವ ಹಿನ್ನೆಲೆ ಇಂದು ಚಿತ್ರದುರ್ಗದಲ್ಲಿ ರೇಣುಕಾ ಸ್ವಾಮಿಯವರ ತಂದೆ ಕಾಶಿನಾಥ್ ಮಾಧ್ಯಮದವರೊಂದಿಗೆ ಮಾತನಾಡಿ, ಕೋರ್ಟ್ ನೀಡಿರುವ ಹೇಲಿಕೆಯನ್ನು ನಾವು ಸ್ವಾಗತಿಸುತ್ತೇವೆ. ನ್ಯಾಯಾಂಗ ವ್ಯವಸ್ಥೆಗೆ ನಾವು ಗೌರವವನ್ನು ನೀಡುತ್ತೇವೆ. ಪೊಲೀಸರು ಈ ಕೇಸ್ ನ ವಿಚಾರವಾಗಿ ಸಾಕಷ್ಟು ಬೆಂಬಲವನ್ನ ನಮಗೆ ನೀಡುತ್ತಿದ್ದಾರೆ, ಶಿಕ್ಷೆ ಯಾವುದಾಗಬೇಕು ಅನ್ನುವುದು ಕೋರ್ಟ್ ತೀರ್ಮಾನ ಮಾಡಲಿದೆ ಎಂದು ಮೃತ ರೇಣುಕಾ ಸ್ವಾಮಿ ಅವರ ತಂದೆ ಕಾಶಿನಾಥ್ ತಿಳಿಸಿದರು.
PublicNext
14/10/2024 06:42 pm