ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : ಬಾರ್ ಸ್ಥಳಾಂತರಕ್ಕೆ ಅಹೋರಾತ್ರಿ ಧರಣಿ - ಅಬಕಾರಿ ಅಧಿಕಾರಿಗಳು ಭೇಟಿ

ಚಳ್ಳಕೆರೆ : ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ಇರುವ ತಿರುಮಲ ಬಾರ್ ಅಂಡ್ ರೆಸ್ಟರೆಂಟನ್ನೂ ಸ್ಥಳಾಂತರ ಮಾಡಲು ಅಹೋರಾತ್ರಿ ಧರಣಿಯನ್ನು ಭಜನೆ ಮೂಲಕ ಪ್ರತಿಭಟಿಸಲಾಯಿತು . ಧರಣಿ ನಿರತ ಸ್ಥಳಕ್ಕೆ ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ‌‌..

ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ ಮಾತನಾಡಿ. ತಿರುಮಲ ಬಾರ್ ಅಂಡ್ ರೆಸ್ಟೋರೆಂಟ್ ಗ್ರಾಮದ ಮಧ್ಯಭಾಗದಲ್ಲಿದ್ದು ಇದರಿಂದ ಅಕ್ಕಪಕ್ಕದಲ್ಲಿರುವ ಮಹಿಳೆಯರಿಗೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿದೆ . ಅದೇ ಬ್ರಹ್ಮಾಂಡನಾಯಕಿ ಗೌರಸಮುದ್ರ ಮಾರಮ್ಮ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿಯೇ ಮತ್ತು ಪಕ್ಕದಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇದ್ದು ಹಣದ ಬಲದಿಂದ ಮತ್ತು ರಾಜಕೀಯ ಬಲದಿಂದ ಕಾನೂನುನು ಗಾಳಿಗೆ ತೂರಿ ಈ ಒಂದು ಸ್ಥಳದಲ್ಲಿ ಬಾರನ್ನು ಕಾನೂನುಬಾಹಿರವಾಗಿ ನಡೆಸುತ್ತಿರುವುದರಿಂದ ಇದನ್ನು ಕೂಡಲೇ ಬೇರೆಂದು ಸ್ಥಳಕ್ಕೆ ಸ್ಥಳಾಂತರ ಮಾಡುವವರೆಗೂ ನಮ್ಮ ಧರಣಿ ನಿಲ್ಲದು ಎಂದರು.

Edited By : Ashok M
PublicNext

PublicNext

15/10/2024 08:17 am

Cinque Terre

30.96 K

Cinque Terre

0

ಸಂಬಂಧಿತ ಸುದ್ದಿ