ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು: ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ - ಸೂಕ್ತ ಕ್ರಮಕ್ಕೆ ಮುಂದಾದ ರಾಂಪುರ ಗ್ರಾ.ಪಂ

ಮೊಳಕಾಲ್ಮುರು: ತಾಲೂಕಿನ ರಾಂಪುರದಲ್ಲಿ ಬುಧವಾರ ಬೀದಿ ನಾಯಿಗಳ ದಾಳಿಗೆ ಬಾಲಕ ಸಿ.ಮಿಥುನ್ ಎಂಬಾತ ಬಲಿಯಾಗಿದ್ದಾನೆ. ಇದರ ಬೆನ್ನಲ್ಲೆ ಸ್ಥಳೀಯ ಗ್ರಾ.ಪಂ ಅಧಿಕಾರಿಗಳು ಶಾಸಕ ಎನ್.ವೈ.ಗೋಪಾಲಕೃಷ್ಣ ಸೂಚನೆಯಂತೆ ಗ್ರಾಮದಲ್ಲಿ ನಾನಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಶಿವಮೊಗ್ಗ ಮೂಲದಿಂದ ತಂಡ ಬಂದಿದ್ದು, ಗ್ರಾಮದ ನಾನಾ ಬಡಾವಣೆಗಳಲ್ಲಿನ 200ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಈ ಕಾರ್ಯಾಚರಣೆಯು ಮುಂದುವರೆಯಲಿದೆ ಎಂದು ಗ್ರಾ.ಪಂ ಪಿಡಿಒ ಗುಂಡಪ್ಪ ಮಾಹಿತಿ ನೀಡಿದರು.

ಈಗಾಗಲೇ ಗ್ರಾ.ಪಂ ವ್ಯಾಪ್ತಿಯಲ್ಲಿ ಚಿಕನ್, ಮಟನ್ ಮಾರಾಟದ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿಸಲಾಗಿದೆ. ಬೀದಿ ಬದಿಗಳಲ್ಲಿ ಚಿಕನ್ ಕಬಾಬ್, ಮಟನ್ ಕಬಾಬ್ ಹಾಗೂ ಎಗ್‌ರೈಸ್ ಮಾರಾಟವನ್ನು ನಿಲ್ಲಿಸಲಾಗಿದ್ದು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ.

Edited By : Vinayak Patil
PublicNext

PublicNext

17/10/2024 05:08 pm

Cinque Terre

20.93 K

Cinque Terre

0

ಸಂಬಂಧಿತ ಸುದ್ದಿ