ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಎಚ್.ಎನ್.ರಾಜ್ಯ ಪ್ರಶಸ್ತಿಗೆ ಅರ್ಹ ಸಾಧಕರಿಂದ ಅರ್ಜಿ ಆಹ್ವಾನ

ಕುಂದಗೋಳ : 28 & 29 ಡಿಸೆಂಬರ್ 2024 ರಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ದೊಡ್ಡಬಳ್ಳಾಪುರ, ಬೆಂಗಳೂರು ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ ಇವರ ನೇತೃತ್ವದಲ್ಲಿ ಬೆಂಗಳೂರಿನ ಬಾಗಲೂರು ವಿ.ಜೆ. ಇಂಟರ್ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ 4 ನೇ ವೈಜ್ಞಾನಿಕ ಸಮ್ಮೇಳನದಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ ಒಬ್ಬ ವೈಜ್ಞಾನಿಕ ಕ್ಷೇತ್ರದಲ್ಲಿ ಶ್ರಮಿಸಿದ ಸಾಧಕರಿಗೆ ರಾಜ್ಯಮಟ್ಟದ *"ಎಚ್.ನರಸಿಂಹಯ್ಯ ರಾಜ್ಯ ಪ್ರಶಸ್ತಿ-2024" (ಎಚ್.ಎನ್.ಪ್ರಶಸ್ತಿ)* ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ನಮ್ಮ ಹುಬ್ಬಳ್ಳಿ - ಧಾರವಾಡ ಜಿಲ್ಲೆಯಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಶ್ರಮಿಸಿದ ಸಾಧಕರನ್ನು 2024ರ ಎಚ್.ಎನ್. ಪ್ರಶಸ್ತಿಗೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವರಿಗೆ ಸೂಚನೆಗಳು: ಕ.ರಾ.ವೈ.ಸಂ.ಪ. ಪದಾಧಿಕಾರಿಗಳಾಗಿರಬಾರದು, 50 ವರ್ಷ ಮೇಲ್ಪಟ್ಟಿರಬೇಕು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ವೈಜ್ಞಾನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರಬೇಕು, ಸ್ವ-ಅರ್ಜಿಯು ಪೂರ್ಣ ಹೆಸರು, ಭಾವಚಿತ್ರ, ಮೊಬೈಲ್ ಸಂಖ್ಯೆ, ವಿಳಾಸ, ತಮ್ಮ ಸಾಧನೆ ಒಳಗೊಂಡಿರಬೇಕು,

ಆಸಕ್ತರು ಅರ್ಜಿಯನ್ನು ಪಿ.ಡಿ.ಎಫ್. ಮಾಡಿ ಕೆಳಗಿನ ಮೊಬೈಲ್ ಸಂಖ್ಯೆಗೆ ಕಳಿಸುವುದು. ಹಾಗೂ ಎರಡು ಪ್ರತಿ ಹಾರ್ಡ್ ಕಾಫಿಯನ್ನು ಕೆಳಗೆ ಸೂಚಿಸಿದ ವಿಳಾಸಕ್ಕೆ 19 ಅಕ್ಟೋಬರ್ 2024 ರ ಒಳಗಾಗಿ ತಲುಪುವಂತೆ ಕಳಿಸಬೇಕೆಂದು ಡಾ. ಮಂಜುನಾಥ ಬಾರಕೇರ ಜಿಲ್ಲಾಧ್ಯಕ್ಷರು ಕ.ರಾ.ವೈ.ಸಂ.ಪ. ಹುಬ್ಬಳ್ಳಿ-ಧಾರವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವ ವಿಳಾಸ : ಡಾ. ಮಂಜುನಾಥ ಬಾರಕೇರ ಅಧ್ಯಕ್ಷರು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು. ಸಾ: ಚಾಕಲಬ್ಬಿ ತಾ: ಕುಂದಗೋಳ, ಜಿ: ಧಾರವಾಡ. ಮೊ. : 7204455103

Edited By : PublicNext Desk
Kshetra Samachara

Kshetra Samachara

17/10/2024 09:43 am

Cinque Terre

1.65 K

Cinque Terre

0

ಸಂಬಂಧಿತ ಸುದ್ದಿ