ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ಮಳೆ ನೀರು ನುಗ್ಗಿ ನಿವಾಸಿಗಳು ನರಕಯಾತನೆ ಅನುಭವಿಸಿದ್ದಾರೆ.
ಜಲದಿಗ್ಭಂಧನಕ್ಕೆ ಸಿಲುಕಿ ಚಿಕ್ಕಮಕ್ಕಳು ಮತ್ತು ವೃದ್ಧರು ಮನೆಯಲ್ಲೆ ಕಷ್ಟಪಡುವಂತಾಗಿದೆ. ಬಳಿಕ ಅಪಾರ್ಟ್ಮೆಂಟ್ ಸಹಾಯಕ್ಕೆನ ಧಾವಿಸಿದ ಅಗ್ಮಿ ಶಾಮಕ ಸಿಬ್ಬಂದಿ ಟ್ರ್ಯಾಕ್ಟರ್ ಮೂಲಕ ನಿವಾಸಿಗಳನ್ನ ಶಿಫ್ಟ್ ಮಾಡಿದ್ದಾರೆ. ಇನ್ನು ದೊಡ್ಡ ವಾಟರ್ ಪಂಪ್ ಸೆಟ್ ಮೂಲಕ ನೀರು ಹೊರತೆಗೆಯಲಾಯ್ತು. ಆ ನಂತರ ಜಲದಿಗ್ಬಂಧನದಲ್ಲಿದ್ದವರಿಗೆ ಊಟ, ನೀರಿನ ವ್ಯವಸ್ಥೆ ಮಾಡಲಾಯಿತು
PublicNext
16/10/2024 06:50 pm