ಕೆಜಿಎಫ್: ಕೆಜಿಎಫ್ ನಗರದ ಗಾಲ್ಫ್ ಮೈದಾನ ಬಳಿ ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದ ಪರಿಶೀಲನೆಯನ್ನು ಕೆಜಿಎಫ್ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಮೀನನ್ನು ಕೆಐಎಡಿಬಿಗೆ ನೀಡಿದ್ದನ್ನು ಕೆಲವರು ಗೊಂದಲ ಉಂಟು ಮಾಡಿದ್ದರು. ಆದರೆ ಇದೀಗ ಬಂಗಾರದ ಗಣಿ ಸರ್ವೆ ನಂಬರ್ 2 ಅಂಬೇಡ್ಕರ್ ಸ್ಮಾರಕ ಭವನ, ಮ್ಯೂಸಿಯಂ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ 8 ಎಕರೆ 20 ಗುಂಟೆ ಜಮೀನು ಮೀಸಲಿರಿಸಲಾಗಿದ್ದು, ಸಮಾಜ ಕಲ್ಯಾಣ ಇಲಾಖೆವತಿಯಿಂದ ಉತ್ತಮವಾದ ಅಂಬೇಡ್ಕರ್ ಸ್ಮಾರಕ ಭವನವನ್ನು ನಿರ್ಮಿಸಲಾಗುವುದು. ಇದರಿಂದ ಈ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ ಮತ್ತು ಇದೇ ಜಮೀನಿನಲ್ಲಿ ಪೊಲೀಸ್ ಅಕಾಡೆಮಿಗೆ 100 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
PublicNext
16/10/2024 05:29 pm