ಚಿಕ್ಕಮಗಳೂರು: ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಸುವ ವಿಚಾರಕ್ಕೆ ಚಿಕ್ಕಮಗಳೂರು ನಗರದ ಅಕ್ಸಾ ಮಸೀದಿ ಬಳಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ಆರೋಪಿಗಳನ್ನು ಒಂದು ತಿಂಗಳಾದರೂ ಬಂಧಿಸಿಲ್ಲವೆಂದು ಆಗ್ರಹಿಸಿ ಟೌನ್ ಪೊಲೀಸ್ ಠಾಣೆಯ ಎದುರು ಹಲ್ಲೆಗೊಳಗಾದ ಜಮೀಲ್ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ತಿಂಗಳ 11 ರಂದು ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಸುವ ವಿಚಾರವಾಗಿ ಮೀಟಿಂಗ್ ನಡೆಸಲಾಗಿತ್ತು. ಮೀಟಿಂಗ್ ವೇಳೆ ಒಂದು ಗುಂಪು ಡಿಜೆ ಬಳಸುವುದು ಬೇಡ ಎಂದಿದ್ದರು. ಈ ಸಂಬಂಧ ಗಲಾಟೆ ಶುರುವಾಗಿ ಗಲಾಟೆಯಲ್ಲಿ 40ಕ್ಕೂ ಹೆಚ್ಚು ಜನರು ಜಮೀಲ್ ಖಾನ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದರೆಂದು ಜಮೀಲ್ ದೂರು ನೀಡಿದ್ದರು. ಹಲ್ಲೆ ಮಾಡಿದ್ದ ರಾಹಿಲ್, ವಾರೀಸ್, ಮುಬಾರಕ್, ಕೈಫ್ ವಿರುದ್ಧ ಕೇಸ್ ದಾಖಲಾಗಿತ್ತು. ಆರೋಪಿಗಳನ್ನು ಇನ್ನೂ ಬಂಧಿಸಿಲ್ಲವೆಂದು ಪಟ್ಟು ಹಿಡಿದು ನಗರ ಪೊಲೀಸ್ ಠಾಣೆಯ ಮುಂದೆ ಮಳೆಯಲ್ಲೇ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ನಂತರ ಡಿವೈಎಸ್ಪಿ ಶೈಲೇಂದ್ರ ಅವರು ಪ್ರತಿಭಟನಾಕಾರರ ಮನವೊಲಿಕೆಯ ನಂತರ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು.
PublicNext
16/10/2024 01:09 pm