ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಕೀಲರ ಮೇಲೆ ಹಲ್ಲೆ ಆರೋಪ : ಪೊಲೀಸ್ ಠಾಣೆ ಮುಂದೆ ವಕೀಲರ ಜಮಾವಣೆ

ಚಿಕ್ಕಮಗಳೂರು : ಕ್ಷುಲ್ಲಕ ಕಾರಣಕ್ಕೆ ವಕೀಲರೊಬ್ಬರ ಮೇಲೆ ಯುವಕರು ಹಲ್ಲೆ ಮಾಡಿ ಎರಡು ದಿನ ಕಳೆದರು ಪೊಲೀಸರು ಪ್ರಕರಣ ದಾಖಲಿಸಿಲ್ಲವೆಂದು ಆರೋಪಿಸಿ ನಗರದ ಬಸವನಹಳ್ಳಿ ಠಾಣೆಯ ಎದುರು ಇಂದು ಬೆಳಿಗ್ಗೆ ವಕೀಲರು ಜಮಾವಣೆಗೊಂಡಿದ್ದರು.

ಮಂಗಳವಾರ ರಾತ್ರಿ ನಗರದ ಬಸವನಹಳ್ಳಿಯ ಮುಖ್ಯ ರಸ್ತೆಯಲ್ಲಿ ಓವರ್ ಟೇಕ್ ಮಾಡುವ ವಿಚಾರದಲ್ಲಿ ಸಣ್ಣ ಮಟ್ಟಿಗೆ ಕಿರಿಕ್ ನಡಿದಿತ್ತು ಎನ್ನಲಾಗಿದೆ. ಈ ವೇಳೆ ವಕೀಲರ ಮೇಲೆ ಮೂರ್ನಾಲ್ಕು ಯುವಕರು ಹಲ್ಲೆ ಮಾಡಿದ್ದರೆಂದು ಆರೋಪಿಸಿ ದೂರು ನೀಡಿದರು ಪ್ರಕರಣ ದಾಖಲಿಸಿಲ್ಲವೆಂದು ಬಸವನಹಳ್ಳಿ ಠಾಣೆ ಮುಂದೆ ವಕೀಲರು ಜಮಾವಣೆಗೊಂಡಿದ್ದರು.

ನಂತರ ಪೊಲೀಸರು ದೂರು ದಾಖಲಿಸುವ ಭರವಸೆ ನೀಡಿದ ಬಳಿಕ ವಕೀಲರು ತೆರಳಿದರು.ಆದರೆ ಇದೀಗ ಹೃದಯಘಾತವಾಗಿದ್ದ ರೋಗಿಯೊಬ್ಬನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಜೋರಾಗಿ ಹಾರ್ನ್ ಮಾಡಿದ್ರು ದಾರಿ ಬಿಟ್ಟಿಲ್ಲ ಯಾವುದೇ ಹಲ್ಲೆ ನಡೆದಿಲ್ಲ ಪ್ರತಿದೂರು ನೀಡಿದ್ರು ಪೊಲೀಸರು ಸ್ವೀಕರಿಸುತ್ತಿಲ್ಲ ಎಂದು ಮತ್ತೊಂದು ಕಡೆಯವರಿಂದ ಆರೋಪ ಕೇಳಿ ಬಂದಿದೆ.

Edited By : Vinayak Patil
Kshetra Samachara

Kshetra Samachara

17/10/2024 03:55 pm

Cinque Terre

1.16 K

Cinque Terre

0

ಸಂಬಂಧಿತ ಸುದ್ದಿ