ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖತರ್ನಾಕ್ ಕಳ್ಳರ ಬಂಧನ 30ಲಕ್ಷ ಮೌಲ್ಯದ ವಸ್ತುಗಳ ವಶ

ಚಿಕ್ಕಮಗಳೂರು: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಅಂತರ್ ಜಿಲ್ಲಾ ಖತರ್ನಾಕ್ ಕಳ್ಳರನ್ನು ಬೀರೂರು ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ.

ಮೈಸೂರು, ಮಂಡ್ಯ ಮೂಲದ ರವಿಕುಮಾರ್, ಪುನೀತ್ ಹಾಗೂ ಶಶಿಕುಮಾರ್ ಬಂಧಿತ ಖದೀಮರು ಸರ್ಕಾರಿ ಶಾಲೆ ಕಾಲೇಜುಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಮೂವರು ಖದೀಮರು ರಾತ್ರಿ ವೇಳೆ ಶಾಲಾ ಕಾಲೇಜುಗಳಲ್ಲಿ ಕಂಪ್ಯೂಟರ್, ಯುಪಿಎಸ್ ಬ್ಯಾಟರಿಗಳನ್ನು ಕದ್ದೂಯ್ಯುತ್ತಿದ್ದರು.

ಕಳ್ಳತನ ಮಾಡುವ ಸಲುವಾಗಿಯೇ ಅರಸೀಕೆರೆ ನಗರದ ಅಶೋಕ್ ಲೈಲ್ಯಾಂಡ್ ಶೋರೂಮ್ ನ ರೋಲಿಂಗ್ ಶೆಟರ್ ಮುರಿದು ಮಾರಾಟ ಮಾಡಲು ನಿಲ್ಲಿಸಿದ್ದ ಹೊಸ ಅಶೋಕ್ ಲೈಲ್ಯಾಂಡ್ ದೋಸ್ತ್ ಎಕ್ಸ್.ಎಲ್ ವಾಹನವನ್ನು ಕಳ್ಳತನ ಮಾಡಿರುವುದು ವಿಚಾರಣೆ ವೇಳೆಗೆ ಬೆಳಕಿಗೆ ಬಂದಿದೆ.

ಬಂಧಿತರಿಂದ 8.5 ಲಕ್ಷ ಮೌಲ್ಯದ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ, ಶಾಲಾ ಕಾಲೇಜುಗಳಲ್ಲಿ ಕಳ್ಳತನ ಮಾಡಿದ್ದ 21ಲಕ್ಷ ಮೌಲ್ಯದ ಯು.ಪಿ.ಎಸ್ ಬ್ಯಾಟರಿಗಳು, 88 ಸಾವಿರ ಮೌಲ್ಯದ ಇನ್ವರ್ಟರ್ ಗಳು, 30 ಸಾವಿರ ಮೌಲ್ಯದ ಟಿ.ವಿ ಸೇರಿದಂತೆ ಅಂದಾಜು 30ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Edited By : Suman K
PublicNext

PublicNext

15/10/2024 01:20 pm

Cinque Terre

22.93 K

Cinque Terre

0

ಸಂಬಂಧಿತ ಸುದ್ದಿ