ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕರ್ನಾಟಕ ಸರ್ಕಾರದ ಅಧೀನದ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಹಿರಿಯ ಪತ್ರಕರ್ತರಾದ ಜೆ.ಅಬ್ಬಾಸ್ ಮುಲ್ಲಾ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿಂದು ವಡ್ಡರ್ಸೆ ರಘುರಾಮ ಶೆಟ್ಟಿಯವರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಹಾಗೂ ಮಾಧ್ಯಮ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಜೆ.ಅಬ್ಬಾಸ್ ಮುಲ್ಲಾ ಅವರಿಗೆ ಹಿರಿಯ ಪತ್ರಕರ್ತರ ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೋಚನೇಶ ಹೂಗಾರ, ಸುಶೀಲೇಂದ್ರ ಕುಂದರಗಿ, ಡಾ.ಬಂಡು ಕುಲಕರ್ಣಿ, ವಿಜಯ ಹೂಗಾರ, ಮಲ್ಲಿಕಾರ್ಜುನ ಸಿದ್ಧಣ್ಣವರ, ವಿರೇಶ ಹಂಡಗಿ, ಯಲ್ಲಪ್ಪ ಸೋಲಾರಗೊಪ್ಪ ನೇತೃತ್ವದಲ್ಲಿ ಆತ್ಮೀಯವಾಗಿ ಸನ್ಮಾನಿಸುವ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.
ಇನ್ನೂ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಡಾ.ಶಿವರಾಮ್ ಅಸುಂಡಿ, ಬಸವರಾಜ ಕಟ್ಟಿಮನಿ, ಗುರು ಬಾಂಡಗೆ, ನಾರಾಯಣ ವೈದ್ಯ ಸೇರಿದಂತೆ ಇತರರು ಜೆ.ಅಬ್ಬಾಸ್ ಮುಲ್ಲಾ ಅವರ ಕಾರ್ಯವೈಖರಿ ಕೊಂಡಾಡಿದ್ದಾರೆ. ಅಲ್ಲದೇ ಈ ಒಂದು ಕಾರ್ಯಕ್ರಮದಲ್ಲಿ ಪ್ರಕಾಶ ನೂಲ್ವಿ, ಬಸವರಾಜ ಹೂಗಾರ, ಸಂಗಮೇಶ ಮೆಣಸಿನಕಾಯಿ, ಕಾಶಪ್ಪ ಕರದಿನ, ಹೇಮರೆಡ್ಡಿ ಸೈದಾಪುರ, ಮಹೇಂದ್ರ ಚವ್ಹಾಣ ಸೇರಿದಂತೆ ಪತ್ರಕರ್ತರು ಭಾಗವಹಿಸಿ ಶುಭ ಹಾರೈಸಿದರು.
Kshetra Samachara
16/10/2024 07:32 am