ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾಲೀಕನಿಗೆ ಗೊತ್ತಾಗದಂತೆ ಹಂತಹಂತವಾಗಿ ಚಿನ್ನ ದೋಚಿದ್ದ ಖದೀಮನ ಬಂಧನ

ಬೆಂಗಳೂರು: ಎಸ್.ಆರ್. ನಗರದ ಚಿನ್ನದ ವ್ಯಾಪಾರಿಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಮಾಲೀಕನಿಗೆ ಗೊತ್ತೆ ಆಗದೆ ಹಂತಹಂತವಾಗಿ ಒಂದೂವರೆ ಕೆಜಿ ಚಿನ್ನ ಕದ್ದು ಸ್ನೇಹಿತ ವಿಷ್ಣು ಎಂಬಾತನ ಜೊತೆ ಸೇರಿ ಮಾರಾಟ ಮಾಡ್ತಿದ್ದ.

ಮಾಲೀಕ ಆಡಿಟ್ ಮಾಡಿದಾಗ ಅಂಗಡಿಯಲ್ಲಿದ್ದ‌ ಚಿನ್ನ ಕರಗಿರೋದು ಗೊತ್ತಾಗಿದೆ.‌ ಈ ವಿಚಾರವಾಗಿ ಒಂದು ವರ್ಷದ ಹಿಂದೆ ಚಿನ್ನದಂಗಡಿ ಮಾಲೀಕ ನೀಡಿದ ದೂರಿನ ಆಧಾರದಲ್ಲಿ ಕೆಲಸಗಾರ ಅರವಿಂದ್ ನನ್ನ ಪೊಲೀಸ್ರು ಲಾಕ್ ಮಾಡಿದ್ದಾರೆ. ಪೊಲೀಸರು ಪ್ರಕರಣದ ಸೂತ್ರಧಾರಿ ವಿಷ್ಣು ಎಂಬಾತನಿಗಾಗಿ ಶೋಧ ನಡೆಸ್ತಿದ್ರು. ಕಳೆದ‌ ತಿಂಗಳು ತಿರುಪತಿಯಲ್ಲಿ ಪೊಲೀಸರ ಬಲೆಗೆ ಬಿದ್ದ ವಿಷ್ಣುವಿನಿಂದ 740 ಗ್ರಾಂ ಚಿನ್ನದ ಗಟ್ಟಿ ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಎರಡು ಪ್ರತ್ಯೇಕ ಪ್ರಕರಣ ಭೇದಿಸಿದ ಎರಡು ಠಾಣೆಯ ಪೊಲೀಸರಿಗೆ ಶ್ಲಾಘನೆ ವ್ಯಕ್ತವಾಗಿದೆ.

Edited By : Vinayak Patil
PublicNext

PublicNext

15/10/2024 08:24 pm

Cinque Terre

23.44 K

Cinque Terre

0

ಸಂಬಂಧಿತ ಸುದ್ದಿ