ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಬೇಲ್ ರಿಜೆಕ್ಟ್ - ಹೈಕೋರ್ಟ್ ಮೊರೆ ಹೋಗಲು ದರ್ಶನ್ ಪರ ವಕೀಲರ ತಯಾರಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ದರ್ಶನ್‌ಗೆ ನಿನ್ನೆ ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿ ಜಾಮೀನು ನಿರಾಕರಿಸಿದೆ. ಈಗಾಗಲೇ ಕೆಳ ನ್ಯಾಯಾಲಯದಲ್ಲಿ ಜಾಮೀನು ವಜಾ ಹಿನ್ನೆಲೆ ಹೈ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ದರ್ಶನ್ ಪರ ವಕೀಲರು ತಯಾರಿ ನಡೆಸಿದ್ದಾರೆ.

ಈಗಾಗಲೇ ವಕೀಲರ ಜೊತೆ ನಟ ದರ್ಶನ್ ಹಾಗೂ ದರ್ಶನ್ ಕುಟುಂಬಸ್ಥರು ಚರ್ಚೆ ನಡೆಸಿದ್ದಾರೆ. ಪತ್ನಿ, ಆಪ್ತರ ಜೊತೆ ಮೊದಲೇ ಈ ಬಗ್ಗೆ ಚರ್ಚೆ ಮಾಡಿರೋ ದರ್ಶನ್ ಒಂದು ವೇಳೆ ಜಾಮೀನು ಅರ್ಜಿ ವಜಾ ಅದ್ರೆ ಹೈಕೋರ್ಟ್ ಮೋರೆಗೆ ಹೋಗಲು ತಯಾರಿ ನಡೆಸಿ ಅಂತ ಹೇಳಿದ್ರಂತೆ. ಇಂದು ಅಥವಾ ನಾಳೆ ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸೋ ಸಾಧ್ಯತೆಯಿದೆ. ದರ್ಶನ್ ಪರ ಹಿರಿಯ ವಕೀಲರಾದ ಸಿ.ವಿ ನಾಗೇಶ್ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ದರ್ಶನ್ ಮಾದರಿಯಲ್ಲೇ ಗೆಳತಿ ಪವಿತ್ರಗೌಡ ಕೂಡ ಹೈಕೋರ್ಟ್ ಮೋರೆಗೆ ಸಿದ್ದತೆ ನಡೆಸಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

15/10/2024 11:04 am

Cinque Terre

710

Cinque Terre

0

ಸಂಬಂಧಿತ ಸುದ್ದಿ