ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಾ. ವಿಎಸ್‌ವಿ ಪ್ರಸಾದ್‌ಗೆ ಭಗನಿ ನಿವೇದಿತಾ ವಿದ್ಯಾಲಯದಿಂದ ಅಭಿನಂದನೆ ಮಹಾಪೂರ

ಹುಬ್ಬಳ್ಳಿ: ಸ್ವರ್ಣ ಗ್ರೂಪ್‌ ಆಫ್ ಕಂಪನಿಯ ಮಾಲೀಕ ಡಾ. ಸಿ.ಎಚ್. ವಿಎಸ್‌ವಿ ಪ್ರಸಾದ್ ಅವರು ತಮ್ಮ ಉದ್ಯಮದ ಜೊತೆಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಿಗಿಸಿಕೊಂಡಿದ್ದನ್ನು ಗಮನಿಸಿದ, ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು, ಇವರ ಸಾಧನೆ ಮತ್ತು ಗೌರವವನ್ನು ಮೆಚ್ಚಿ ಇಂದು ಹುಬ್ಬಳ್ಳಿಯ ನವನಗರದ ಭಗನಿ ನಿವೇದಿತಾ ವಿದ್ಯಾಲಯದಿಂದ ಹೃದಯಪೂರ್ವಕವಾಗಿ ಸನ್ಮಾನಿಸಿ ಗೌರವ ಸಲ್ಲಿಸಿದರು.

ಡಾ. ವಿಎಸ್‌ವಿ ಪ್ರಸಾದ್ ಅವರು, ತಮ್ಮ ಉದ್ಯಮದ ಜೊತೆಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದನ್ನೆಲ್ಲವನ್ನು ಪರಿಗಣಿಸಿದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ. ಅವರ ಸಾಧನೆಗೆ ನವನಗರ ಭಗನಿ ನಿವೇದಿತಾ ವಿದ್ಯಾಲಯದ ಸದಸ್ಯರು ಮತ್ತು ಆರ್‌ಎಸ್ಎಸ್ ಮುಖಂಡರು ಇಂದು ವಿಎಸ್‌ವಿ ಪ್ರಸಾದ್ ಅವರಿಗೆ ಸನ್ಮಾನಿಸಿ ಒಂದು ಪುಸ್ತಕ ನೀಡಿದ್ದಾರೆ. ವಿಎಸ್‌ವಿ ಪ್ರಸಾದ್ ಅವರ ಕಾರ್ಯಕ್ಕೆ ಹಿರಿಯರು ಹಾಡಿ ಹೊಗಳಿದ್ದಾರೆ.

ವಿಎಸ್‌ವಿ ಪ್ರಸಾದ್ ಅವರು ಇಷ್ಟೊಂದು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮುಖ್ಯ ಕಾರಣವೇ ಕಾಯಕವೇ ಕೈಲಾಸ, ಬಸವಣ್ಣನವರ ತತ್ವವನ್ನು ಅಳವಡಿಸಿಕೊಂಡು ತಾವು ದುಡಿದ ಹಣದಲ್ಲಿ ಶೈಕ್ಷಣಿಕವಾಗಿ, ದೇವಸ್ಥಾನಗಳಿಗೆ, ಬಡವರಿಗೆ ಸಹಾಯ ಮಾಡ್ತಾ ಬಂದಿದ್ದಾರೆ. ಇದನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ.

ಇನ್ನು ಡಾ. ವಿಎಸ್‌ವಿ ಪ್ರಸಾದ್ ಅವರಿಗೆ ಇದು ಎರಡನೇ ಗೌರವ ಡಾಕ್ಟರೇಟ್ ಪದವಿಯಾಗಿದ್ದು, ಇವರ ಸಾಧನೆ ಹೀಗೆ ಶಿಖರಕ್ಕೆ ಏರಲಿ ಎಂಬುದು ಹುಬ್ಬಳ್ಳಿ ಧಾರವಾಡ ಜನರ ಆಶಯವಾಗಿದೆ.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/10/2024 07:15 pm

Cinque Terre

59.47 K

Cinque Terre

0

ಸಂಬಂಧಿತ ಸುದ್ದಿ