ಮೊಳಕಾಲ್ಮೂರು:- ಅಶೋಕ ಸಿದ್ದಾಪುರ ಗ್ರಾಮ ವ್ಯಾಪ್ತಿಯ ಶ್ರೀ ಸಿದ್ದೇಶ್ವರ ಸ್ವಾಮಿ ಮಠದ ಬ್ರಹ್ಮಗಿರಿ ಕ್ಷೇತ್ರದಲ್ಲಿ ದಸರಾ ಹಬ್ಬದ ನಿಮಿತ್ತವಾಗಿ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶರನ್ನವ ರಾತ್ರಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
63ನೇ ವರ್ಷದ ಶ್ರೀದೇವಿ ಪುರಾಣ ಪ್ರಯುಕ್ತ ಶನಿವಾರದಂದು ಶ್ರಿಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸ್ಥಿರ ಗುರು ಪಟ್ಟಾಧ್ಯಕ್ಷ ಶ್ರೀ ತ್ರಿಲೋಚನ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ತ್ರಿಶಂಕೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಸಲಾಯಿತು.
ಶ್ರೀ 1008 ಜಗದ್ಗುರು ಸ್ಥಿರ ಗುರು ಪಟ್ಟಾಧ್ಯಕ್ಷ ಶ್ರೀ ತ್ರಿಲೋಚನ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಮತ್ತು ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯಸ್ವಾಮಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪ್ರತಿನಿತ್ಯ ಪುರಾಣ ವಾಚನ ಪ್ರವಚನ ಸೇರಿದಂತೆ ಭಕ್ತರ ಸಮ್ಮುಖದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಶಿವ ಕ್ಷೇತ್ರ ಬ್ರಹ್ಮಗಿರಿ ಬೆಟ್ಟದ ನಿತ್ಯ ದಾಸೋಹಿ ಶ್ರೀ ಕಾಯಕಯೋಗಿ ಸೋಮಶೇಖರ ಸ್ವಾಮಿಯವರ ನೇತೃತ್ವದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆದವು.
PublicNext
13/10/2024 07:19 pm