ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಊದುಪೂಜೆಯಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಭಾಗಿ - ಹುಲಿವೇಷ ಕುಣಿತ ಕಂಡು ಫುಲ್‌ಖುಷ್

ಮಂಗಳೂರು: ಫ್ರೆಂಡ್ಸ್ ಬಳ್ಳಾಲ್‌ಬಾಗ್ ಬಿರುವೆರ್ ಕುಡ್ಲ ಸಂಸ್ಥೆಯ ವತಿಯಿಂದ ನಗರದ ಬಳ್ಳಾಲ್‌ಬಾಗ್‌ನಲ್ಲಿ ನಡೆದ ಹುಲಿವೇಷದ ಊದುಪೂಜೆಯಲ್ಲಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಭಾಗಿಯಾಗಿ ಹುಲಿವೇಷ ಕುಣಿತ ಕಂಡು ಫುಲ್‌ಖುಷ್ ಆಗಿದ್ದಾರೆ.

ಮಂಗಳೂರು ದಸರಾ ಅದ್ದೂರಿ ಮೆರವಣಿಗೆಗೆ ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ನೇತೃತ್ವದ ಹುಲಿವೇಷ ಕುಣಿತ ನಡೆಯುತ್ತದೆ. ಹುಲಿವೇಷಧಾರಿಗಳು ಬಣ್ಣಹಚ್ಚುದಕ್ಕಿಂತ ಮೊದಲು ಊದುಪೂಜೆ ನಡೆಯುತ್ತದೆ. ಈ ಬಾರಿ 10ನೇ ವರ್ಷದ ಹುಲಿವೇಷ ಕುಣಿತ ಊದುಪೂಜೆಗೆ ಬಾಲಿವುಡ್ ನಟ ಸಂಜಯ್ ದತ್ ಭಾಗಿಯಾಗಿದ್ದಾರೆ.

ಈ ವೇಳೆ ಸಂಜಯ್ ದತ್‌ಗೆ ಹುಲಿವೇಷದ ತಲೆಯ ಪ್ರತಿಕೃತಿಯನ್ನು ನೀಡಿ ಅಭಿನಂದಿಸಲಾಯಿತು. ಊದುಪೂಜೆಯ ಬಳಿಕ ಹುಲಿವೇಷದ ಕುಣಿತವನ್ನು ವೀಕ್ಷಿಸಿ ನಟ ಸಂಜಯ್ ದತ್ ಫುಲ್ ಖುಷ್ ಆದರು. ಊದುಪೂಜೆಗಿಂತ ಮೊದಲು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹತ್ತು ಮಂದಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು.

Edited By : Manjunath H D
PublicNext

PublicNext

13/10/2024 07:39 am

Cinque Terre

55.4 K

Cinque Terre

0

ಸಂಬಂಧಿತ ಸುದ್ದಿ