ಮಂಗಳೂರು: ಹಸಿ ಮೀನು ಸಾಗಾಟದ ಕಂಟೇನರ್ ವಾಹನವೊಂದು ಡಿಕ್ಕಿಯಾಗಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಯುವತಿಯೋರ್ವಳು ಮೃತಪಟ್ಟ ಘಟನೆ ನಂತೂರು ಜಂಕ್ಷನ್ ಬಳಿ ಶಾಂತಿ ಕಿರಣ ಕಟ್ಟಡದ ಮುಂಭಾಗ ನಡೆದಿದೆ
ನಗರದ ಕೋಡಿಕಲ್ ನಿವಾಸಿ ಕುಮಾರಿ ಕ್ರಿಸ್ತಿ ಕ್ರಾಸ್ತಾ(27) ಮೃತಪಟ್ಟ ಯುವತಿ.
ರವಿವಾರ ಮಧ್ಯಾಹ್ನ 3.40 ಸುಮಾರಿಗೆ ಕುಮಾರಿ ಕ್ರಿಸ್ತಿ ಕ್ರಾಸ್ತಾರವರು ನಂತೂರು ಜಂಕ್ಷನ್ನಿಂದ ಪಂಪ್ ವೆಲ್ ಕಡೆಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ನಂತೂರು ಜಂಕ್ಷನ್ ಬಳಿ ಶಾಂತಿ ಕಿರಣ ಕಟ್ಟಡದ ಮುಂಭಾಗ ಬರುತ್ತಿದ್ದಂತೆ ಹಸಿ ಮೀನು ಸಾಗಾಟದ ಕಂಟೇನರ್ ವಾಹನವನ್ನು ಚಾಲಕ ಅಜಾಗರಕತೆಯಿಂದ ಚಲಾಯಿಸಿಕೊಂಡು ಪರಿಣಾಮ ಸ್ಕೂಟರ್ಗೆ ಡಿಕ್ಕಿಯಾಗಿದೆ. ಪರಿಣಾಮ ಕುಮಾರಿ ಕ್ರಿಸ್ತಿ ಕ್ರಾಸ್ತ ಸ್ಕೂಟರ್ ನಿಂದ ರಸ್ತೆಗೆ ಬಿದ್ದು ಕಂಟೇನರ್ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
20/10/2024 10:20 pm