ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಂಟೇನರ್ ಡಿಕ್ಕಿಯಾಗಿ ಸ್ಕೂಟರ್ ಯುವತಿ ಮೃತ್ಯು

ಮಂಗಳೂರು: ಹಸಿ ಮೀನು ಸಾಗಾಟದ ಕಂಟೇನರ್ ವಾಹನವೊಂದು ಡಿಕ್ಕಿಯಾಗಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಯುವತಿಯೋರ್ವಳು ಮೃತಪಟ್ಟ ಘಟನೆ ನಂತೂರು ಜಂಕ್ಷನ್ ಬಳಿ ಶಾಂತಿ ಕಿರಣ ಕಟ್ಟಡದ ಮುಂಭಾಗ ನಡೆದಿದೆ

ನಗರದ ಕೋಡಿಕಲ್ ನಿವಾಸಿ ಕುಮಾರಿ ಕ್ರಿಸ್ತಿ ಕ್ರಾಸ್ತಾ(27) ಮೃತಪಟ್ಟ ಯುವತಿ.

ರವಿವಾರ ಮಧ್ಯಾಹ್ನ 3.40 ಸುಮಾರಿಗೆ ಕುಮಾರಿ ಕ್ರಿಸ್ತಿ ಕ್ರಾಸ್ತಾರವರು ನಂತೂರು ಜಂಕ್ಷನ್‌ನಿಂದ ಪಂಪ್ ವೆಲ್ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು‌. ನಂತೂರು ಜಂಕ್ಷನ್ ಬಳಿ ಶಾಂತಿ ಕಿರಣ ಕಟ್ಟಡದ ಮುಂಭಾಗ ಬರುತ್ತಿದ್ದಂತೆ ಹಸಿ ಮೀನು ಸಾಗಾಟದ ಕಂಟೇನರ್ ವಾಹನವನ್ನು ಚಾಲಕ ಅಜಾಗರಕತೆಯಿಂದ ಚಲಾಯಿಸಿಕೊಂಡು ಪರಿಣಾಮ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಕುಮಾರಿ ಕ್ರಿಸ್ತಿ ಕ್ರಾಸ್ತ ಸ್ಕೂಟರ್ ‌ನಿಂದ ರಸ್ತೆಗೆ ಬಿದ್ದು ಕಂಟೇನರ್ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

20/10/2024 10:20 pm

Cinque Terre

8.57 K

Cinque Terre

0

ಸಂಬಂಧಿತ ಸುದ್ದಿ