ಹುಬ್ಬಳ್ಳಿ : ಮನೆ ಬೀಗ ಮುರಿದು ಮನೆಯಲ್ಲಿದ್ದ 5.33 ಲಕ್ಷ ಮೌಲ್ಯದ ಆಭರಣ ಕಳತನವಾದ ಘಟನೆ, ಹುಬ್ಬಳ್ಳಿಯ ವಿಜಯನಗರದ ತೃಪ್ತಿ ಬಜಾರನಲ್ಲಿ ನಡೆದಿದೆ.
ದೇವರಮನಿ ಕುಟುಂಬದವರ ಮನೆ ಬೀಗವನ್ನು ಕಳ್ಳರು ಮುರಿದಿದ್ದಾರೆ. ಬಳಿಕ ಮನೆ ಪ್ರವೇಶಿಸಿ ಕೊಠಡಿಯಲ್ಲಿದ್ದ ಬಿರೋ ಬಾಗಿಲು ಮುರಿದು ಈ 2.50 ಲಕ್ಷ ಮೌಲ್ಯದ 50 ಗ್ರಾಂ ಬಂಗಾರದ 4 ಬಳೆ, ಈ 50 ಸಾವಿರ ಮೌಲ್ಯದ 10 ಗ್ರಾಂ 2 ಬಂಗಾರ ಸರ 25 ಸಾವಿರ ಮೌಲ್ಯದ ಉಂಗುರ, 1.50 ಲಕ್ಷ ಮೌಲ್ಯದ ಆಭರಣ, 8 ಸಾವಿರ ಮೌಲ್ಯದ 10 ಗ್ರಾಂ ಬೆಳ್ಳಿ ಬಳೆ ಸೇರಿ ಒಟ್ಟು ಈ 5.33 ಲಕ್ಷ ಮೌಲ್ಯದ ಆಭರಣ ಕಳ್ಳತನವಾಗಿದೆ. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Kshetra Samachara
19/09/2024 12:27 pm