ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: 'ಧಾರ್ಮಿಕ ಕಾರ್ಯಕ್ರಮಗಳಿಂದ ಗ್ರಾಮದ ಅಭಿವೃದ್ಧಿ ಹಾಗೂ ಲೋಕ ಕಲ್ಯಾಣವಾಗಲಿ'

ಮುಲ್ಕಿ: ಕುಳಾಯಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಅಕ್ಟೊಬರ್ 27 ನೇ ರಂದು ಲೋಕಕಲ್ಯಾಣಕ್ಕಾಗಿ ನಡೆಯಲಿರುವ ಗಾಯತ್ರಿ ಜಪ, ಯಜ್ಞದ ಪೂರ್ವಭಾವಿಯಾಗಿ ಬ್ರಾಹ್ಮಣ ಮಿತ್ರರ ನೇತೃತ್ವದಲ್ಲಿ ಗಾಯತ್ರಿ ಜಪ ಕಾರ್ಯಕ್ರಮ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಸುಮಾರು 30 ಜನ ಜಪಕರ್ತರ ಮುಖಾಂತರ ನಡೆಯಿತು.

ಕ್ಷೇತ್ರದ ಅರ್ಚಕ ಪುರುಷೋತಮ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಧಾರ್ಮಿಕ ಕಾರ್ಯಕ್ರಮಗಳಿಂದ ಗ್ರಾಮದ ಅಭಿವೃದ್ಧಿ ಹಾಗೂ ಲೋಕ ಕಲ್ಯಾಣವಾಗಲಿ ಎಂದರು.

ಈ ಸಂದರ್ಭ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ,,ಶ್ರೀಕಾಂತ್ ಭಟ್ ಕೊಲಕಾಡಿ, ಶ್ರೀಪತಿ ಭಟ್ ಪರೆಂಕಿಲ,ಶಿವಳ್ಳಿ ಸ್ಪಂದನ ತಾಲೂಕು ಉಪಾಧ್ಯಕ್ಷ ಗಣೇಶ್ ತಂತ್ರಿ, ಕೋಲ್ನಾಡ್, ವೆಂಕಟೇಶ ಹೆಬ್ಬಾರ್ ಬಪ್ಪನಾಡು,ಪೃಥ್ವೀಶ್ ಏಸ್.ಕೆ.,ಪ್ರಾಣೇಶ್ ಭಟ್,ಅಶ್ವಿನ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/09/2024 08:30 am

Cinque Terre

1.07 K

Cinque Terre

0

ಸಂಬಂಧಿತ ಸುದ್ದಿ