ಕುಂದಗೋಳ : ಇತ್ತೀಚಿಗೆ ಗೃಹ ಬಳಕೆಯ ಸಿಲಿಂಡರ್ ಸ್ಪೋಟಗೊಂಡು ನಾಲ್ವರು ಗಾಯಗೊಂಡ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ರೊಟ್ಟಿಗವಾಡದ ತೀರ್ಥಯ್ಯ ಹಿರೇಮಠ ಅವರು ಮನೆಗೆ ಭೇಟಿ ನೀಡಿ ಶಾಸಕ ಎಂ.ಆರ್.ಪಾಟೀಲ್ ಸಮಾಧಾನ ಹೇಳಿದರು.
ಅದರಂತೆ ಸಂಸದ ಪ್ರಲ್ಹಾದ ಜೋಶಿಯವರ ಜೊತೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಲಿಂಡರ್ ಸ್ಪೋಟಗೊಂಡು ಗಾಯಾಳುಗಳ ಆರೋಗ್ಯ ವಿಚಾರಿಸಿ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗಿ ಮಾಡುವಂತೆ ವೈದ್ಯರಲ್ಲಿ ಸೂಚಿಸಿದರು. ಈ ಸಂದರ್ಭದಲ್ಲಿ ಗಾಯಾಳು ಕುಟುಂಬಸ್ಥರು ಉಪಸ್ಥಿತರಿದ್ದರು.
Kshetra Samachara
17/09/2024 12:36 pm