ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO : ಭೀಕರ ಗುಂಡಿನ ದಾಳಿ, ಓಡಿಹೋಗುತ್ತಿದ್ದ ಉಗ್ರನನ್ನ ಸದೆಬಡಿದ ಸೇನೆ - ದೃಶ್ಯ ಸೆರೆ!

ಜಮ್ಮು&ಕಾಶ್ಮೀರ : ಬಾರಾಮುಲ್ಲಾದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ತನ್ನ ಪ್ರಾಣ ಉಳಿಸಿಕೊಳ್ಳಲು ಓಡಿಹೋಗುತ್ತಿದ್ದ ಭಯೋತ್ಪಾದಕನನ್ನು ಭಾರತೀಯ ಸೇನೆ ಸದೆಬಡಿದಿದ್ದಾರೆ..

ರಾಷ್ಟ್ರೀಯ ರೈಫಲ್ಸ್ ಕಮಾಂಡರ್ ಬ್ರಿಗೇಡಿಯರ್ ಸಂಜಯ್ ಕನ್ನೋತ್ ಅವರು, 'ಬಾರಾಮುಲ್ಲಾದ ಚಕ್ ಟಪ್ಪರ್ ಕ್ರಿಯರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಡ್ರೋನ್ ದೃಶ್ಯಗಳಲ್ಲಿ ಭಯೋತ್ಪಾದಕನೊಬ್ಬ ಮನೆಯಿಂದ ಹೊರಬಂದು ಓಡಿ ಹೋಗಲು ಯತ್ನಿಸುತ್ತಿದ್ದನು. ಈ ವೇಳೆ ಭಾರತೀಯ ಸೇನೆಯ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಭೀಕರ ಗುಂಡಿನ ದಾಳಿಯ ನಡುವೆ, ಉಗ್ರ ನೆಲದ ಮೇಲೆ ಬಿದ್ದು ಕೆಲವು ಮೀಟರ್‌ಗಳವರೆಗೆ ನೆಲದ ಮೇಲೆ ತೆವಳುತ್ತಾ ಹೋಗಿ ಗಿಡಗಳ ಕೆಳಗೆ ಅವಿತು ಕುಳಿತುಕೊಳ್ಳುತ್ತಾನೆ. ಆದರೆ ಸೇನಾ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಭಯೋತ್ಪಾದಕ ಸಾವನ್ನಪ್ಪಿದ್ದಾನೆ.

ಭಯೋತ್ಪಾದಕರ ಚಟುವಟಿಕೆಯ ಬಗ್ಗೆ ಮಾಹಿತಿ ತಿಳಿದು, ಭದ್ರತಾ ಪಡೆಗಳು ಶುಕ್ರವಾರ ತಡರಾತ್ರಿ ಉತ್ತರ ಕಾಶ್ಮೀರ ಜಿಲ್ಲೆಯ ಪಟ್ಟಾನ್ ಪ್ರದೇಶದ ಚಕ್ ತಪ್ಪರ್ ಕ್ರಿರಿಯಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನಾವು ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದ್ದೇವೆ ಎಂದು ಸಂಜಯ್ ಕನ್ನೋತ್ ತಿಳಿಸಿದ್ದಾರೆ.

Edited By : Abhishek Kamoji
PublicNext

PublicNext

17/09/2024 11:09 am

Cinque Terre

85.39 K

Cinque Terre

20

ಸಂಬಂಧಿತ ಸುದ್ದಿ