ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು; ಆಲೂರು ಕೋಳಿ ಅಂಕದ ಅಡ್ಡೆ ಮೇಲೆ ದಾಳಿ: 12 ಮಂದಿ ಹಾಗೂ ಐದು ವಾಹನ ವಶ!!

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಆಲೂರು ಗ್ರಾಮದ ಆಲೂರು ಕೆಂಪು ಕಲ್ಲು ಪಾರಿ ಎಂಬಲ್ಲಿ ಕಲ್ಲು ಪರಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿಕೊಂಡು ಒಂದಷ್ಟು ಜನರು ಕೋಳಿಗಳ ಕಾಲಿಗೆ ಅಂಕಕ್ಕೆ ಬಳಸುವ ಆಯುಧವನ್ನು ಕಟ್ಟಿ ಕೋಳಿ ಅಂಕ ಜುಗಾರಿ ಆಟ ನಡೆಯುತ್ತಿರುವದನ್ನು ಗಂಗೊಳ್ಳಿ ಪೊಲೀಸರು ಖಚಿತ ಮಾಹಿತಿ ಪಡೆದು ಗಂಗೊಳ್ಳಿ ಪೊಲೀಸ್ ಠಾಣಾ ತನಿಖಾಧಿಕಾರಿ ಬಸವರಾಜ್ ಕನಶೆಟ್ಟಿ ಹಾಗೂ ಸಿಬ್ಬಂದಿ 15 -09-2024ರ ಆದಿತ್ಯವಾರ ಮಧ್ಯಾಹ್ನ 4ಗಂಟೆಗೆ ಕೋಳಿ ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿ ಜೂಜು ಕೋರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರ ಸಿನಿಮಾಯ ರೀತಿಯಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೂಜು ಕೋರರು (1)ಜಯಶೀಲ ಶೆಟ್ಟಿ, 2 ನರೇಂದ್ರ ಪೂಜಾರಿ, 3 ಸುಧೀರ್, 4 ಗಣೇಶ್ ಪೂಜಾರಿ, 5 ಸತೀಶ್, 6 ಶೇಖರ, 7 ದೀಪಕ್ ಕುಲಾಲ, 8 ಕಿರಣ್ ದೇವಾಡಿಗ, 9 ಸುನಿಲ್ ಮೊಗವೀರ, 10 ಮಂಜುನಾಥ, 11 ರಾಜು, 12 ಸತೀಶ, ಎಂಬ 12ಮಂದಿ ಆರೋಪಿಗಳನ್ನು ಹಾಗೂ 5 ವಾಹನಗಳನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

ಜೂಜು ಕೋರರು ಕೋಳಿ ಅಂಕಕ್ಕೆ ಬಳಸಿದ ಜೀವಂತ ಕೋಳಿ, 4 ಕೋಳಿ ಕಾಲಿಗೆ ಬಾಳು ಕಟ್ಟುವ ಹಗ್ಗ ಮತ್ತು ನಗದು ಕೋಳಿ ಅಂಕಕ್ಕೆ ಬಳಸಿದ ವಸ್ತುಗಳನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ,

ಜೂಜು ಕೋರರ ವಿರುದ್ಧ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

16/09/2024 10:54 pm

Cinque Terre

3.63 K

Cinque Terre

0

ಸಂಬಂಧಿತ ಸುದ್ದಿ