ಹುಬ್ಬಳ್ಳಿ : ಎಲ್ಲೇಡೆ ನಡೆದ ಸಂಭ್ರಮ ಸಡಗರದ ಗಣೇಶ ಉತ್ಸವದ ಅಂಗವಾಗಿ ಈ ಬಾರಿ ದುರ್ಗಾ ಡೆವಲಪರ್ಸ್ & ಪ್ರಮೋಟರ್ಸ್, ಪಬ್ಲಿಕ್ ನೆಕ್ಸ್ಟ್ ಗಣೇಶ ಪೆಸ್ಟ್ -24 ಕಾರ್ಯಕ್ರಮದಲ್ಲಿ ಪ್ರತಿಷ್ಠಾಪಿತ ಮೂರು ಮನೆ ಗಣೇಶನಿಗೆ ಬಹುಮಾನ ಸಂದಿದೆ.
ಪಬ್ಲಿಕ್ ನೆಕ್ಸ್ಟ್ ಗಣೇಶ್ ಫೆಸ್ಟ್ -24 ಕಾರ್ಯಕ್ರಮಕ್ಕೆ ಈ ಬಾರಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿ ಸಾವಿರಕ್ಕೂ ಅಧಿಕ ಜನ ಪಬ್ಲಿಕ್ ನೆಕ್ಸ್ಟ್ ಮನೆ ಗಣೇಶ ಸ್ಪರ್ಧೆಗೆ ತಮ್ಮ ಮನೆಯ ಪರಿಸರ ಸ್ನೇಹಿ ಗಜಮುಖ ಪ್ರತಿಷ್ಠಾಪನೆ, ಅಲಂಕಾರದ ಒಂದಕ್ಕೊಂದು ಸುಂದರ ಪೋಟೋ ಕಳುಹಿಸಿದ್ದರು.
ಅವುಗಳಲ್ಲಿ ಅರ್ಹ ಮೂರು ಗಣೇಶ ನಿಯಮಾನುಸಾರ ಆಯ್ಕೆ ಆಗಿವೆ,
ಮನೆ ಗಣೇಶ ಪ್ರತಿಷ್ಠಾಪನೆಯಲ್ಲಿ ಪ್ರಥಮ ಬಹುಮಾನ ಬಸವರಾಜ ಮನಗೂಳಿ, ನೇಕಾರನಗರ, ಹುಬ್ಬಳ್ಳಿ, ದ್ವೀತಿಯ ಬಹುಮಾನ ದೀಪಕ್ ಮೆಹರವಾಡೆ, ನಾಗಶೆಟ್ಟಿಕೊಪ್ಪ ಹುಬ್ಬಳ್ಳಿ ಇನ್ನೂ ತೃತೀಯ ಬಹುಮಾನ ಗಿರೀಶ್ ಬೆಣ್ಣೂರು ಸಪ್ತಾಪುರ 7th ಕ್ರಾಸ್, ಧಾರವಾಡ ಇವರ ಮನೆ ಸೇರಿದೆ.
ಅದರಂತೆ ಶ್ರೀ ದುರ್ಗಾ ಡೆವಲಪರ್ಸ್ & ಪ್ರಮೊಟರ್ಸ್ ಪಬ್ಲಿಕ್ ನೆಕ್ಸ್ಟ್ ಗಣೇಶ ಪೆಸ್ಟ್-24 ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮನೆ ಗಣೇಶ ಪ್ರತಿಷ್ಠಾಪಿತ ವ್ಯಕ್ತಿಗೆ ಗೌರವಪೂರ್ವಕ ಉಡಗೂರೆಯನ್ನು ಸೆಪ್ಟೆಂಬರ್ 14 ರಂದು ಶನಿವಾರ ಹುಬ್ಬಳ್ಳಿ ವಾಣಿಜ್ಯ ಮಂಡಳಿ ಸಭಾಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನೀಡಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಗುರುರಾಜಯೊಗೇಂದ್ರ ಮಹಾಸ್ವಾಮಿಗಳು, ಮೂರು ಸಾವಿರ ಮಠ ವಹಿಸಿದ್ದರೇ, ಮುಖ್ಯ ಅತಿಥಿಗಳಾಗಿ ಶಾಸಕ ಮಹೇಶ್ ಟೆಂಗಿನಕಾಯಿ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾ ಡೆವಲಪರ್ಸ್ & ಪ್ರಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕ ವಿರೇಶ್ ಉಂಡಿ ಮತ್ತು ಪಬ್ಲಿಕ್ ನೆಕ್ಸ್ಟ್ ತಂಡ ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/09/2024 06:59 pm