ಬಂಟ್ವಾಳ: ಬಿ.ಸಿ.ರೋಡ್ನಲ್ಲಿ ಮತ್ತೆ ಹೈಡ್ರಾಮಾ ಭುಗಿಲೇಳಲು ಮುಸ್ಲಿಂ ಯುವಕರ ಬೈಕ್ ರ್ಯಾಲಿ ಕಾರಣ. ಪರಿಸ್ಥಿತಿ ತಹಬದಿಗೆ ಬಂದ ಬಳಿಕ ಏಕಾಏಕಿ ನಡೆದ ಬೈಕ್ ರ್ಯಾಲಿಯೇ ಮತ್ತೆ ಹೈಡ್ರಾಮಾ ನಡೆಯಲು ಕಾರಣವಾಗಿದೆ.
ಮುಸ್ಲಿಂ ಮುಖಂಡನ ಪ್ರಚೋದನಕಾರಿ ಆಡಿಯೋ ಹಿನ್ನೆಲೆಯಲ್ಲಿ ಸೋಮವಾರ ಹಿಂದೂ ಸಂಘಟನೆಗಳು ಬಿ.ಸಿ.ರೋಡ್ ಚಲೋ ನಡೆಸಿದ್ದವು. ಹಿಂದುತ್ವದ ಭದ್ರಕೋಟೆ ಬಿ.ಸಿ.ರೋಡ್ನಲ್ಲಿ ಕೇಸರಿಯ ಶಕ್ತಿವಪ್ರದರ್ಶನ ನಡೆಸುತ್ತಿದ್ದಂತೆ ಪೊಲೀಸರು ಕಾರ್ಯಕರ್ತರನ್ನು ಹೆದ್ದಾರಿಗೆ ಬಾರದಂತೆ ತಡೆಯಲು ಯತ್ನಿಸಿದ್ದು, ತಳ್ಳಾಟ - ನೂಕಾಟ ನಡೆದಿದೆ. ಬ್ಯಾರಿಕೇಡ್ಗಳನ್ನೇ ತಳ್ಳಿ ಹಾಕಿದಂತಹ ಹೈಡ್ರಾಮಾ ನಡೆದಿದೆ.
ಬಳಿಕ ಪರಿಸ್ಥಿತಿ ಒಂದು ಹಂತಕ್ಕೆ ತಹಬದಿಗೆ ಬಂದಿತ್ತು. ಆದರೆ ಏಕಾಏಕಿ ಕೆಲ ಮುಸ್ಲಿಂ ಯುವಕರ ತಂಡವು ಏಳೆಂಟು ಬೈಕ್ಗಳಲ್ಲಿ ರ್ಯಾಲಿ ನಡೆಸಿದೆ. ಘೋಷಣೆಗಳನ್ನು ಕೂಗಿ ಬಾವುಟವನ್ನು ಹಾರಿಸಿ ಬೈಕ್ ರ್ಯಾಲಿ ನಡೆಸಿದೆ. ಇದು ಹಿಂದೂ ಕಾರ್ಯಕರ್ತರನ್ನು ಕೆರಳಿಸಿತ್ತು. ಪರಿಣಾಮ ತಣ್ಣಗಾಗಿದ್ದ ಹಿಂದೂ ಕಾರ್ಯಕರ್ತರ ಆವೇಶ ಮತ್ತೆ ಕೆರಳಿದೆ. ಆದ್ದರಿಂದ ಹಿಂದೂ ಕಾರ್ಯಕರ್ತರು ಮತ್ತೆ ಚಲೋ ಪ್ರತಿಭಟನೆ ಮುಂದುವರಿಸಿದ್ದಾರೆ. ಪೊಲೀಸರು ಹಿಂದೂ ಕಾರ್ಯಕರ್ತರ ಮನವೊಲಿಸಿದ ಪರಿಣಾಮ ಮತ್ತೆ ಪರಿಸ್ಥಿತಿ ಶಾಂತತೆಗೆ ಮರಳಿದೆ.
PublicNext
16/09/2024 06:12 pm